ಅಸ್ಸಾಂನಲ್ಲಿ ಮುಸ್ಲಿಮರ ಸಂಖ್ಯೆ 50 ಪ್ರತಿಶತ ತಲುಪಿದರೆ, ರಾಜ್ಯವನ್ನು ಬಾಂಗ್ಲಾದೇಶದಲ್ಲಿ ವಿಲೀನಗೊಳಿಸಲು ಪ್ರಯತ್ನ ನಡೆಯಬಹುದು! – Himanta Biswa Sarma

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರಿಂದ ಭೀತಿ ವ್ಯಕ್ತ!

ಗುವಾಹಟಿ (ಅಸ್ಸಾಂ) – ಇಲ್ಲಿ ನಡೆದ ಭಾಜಪದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮಾತನಾಡಿ, ಅಸ್ಸಾಂನಲ್ಲಿ ಬಾಂಗ್ಲಾದೇಶದಿಂದ ಬಂದ ಮುಸ್ಲಿಮರ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಮತ್ತು ಈ ಪರಿಸ್ಥಿತಿಯು ರಾಜ್ಯದ ಅಸ್ತಿತ್ವಕ್ಕೆ ಅಪಾಯಕಾರಿ ಎಂದು ಹೇಳಿದರು. ಒಂದು ವೇಳೆ ಈ ಜನಸಂಖ್ಯೆಯು 50 ಪ್ರತಿಶತಕ್ಕಿಂತ ಹೆಚ್ಚಾದರೆ, ಅಸ್ಸಾಂ ಅನ್ನು ಬಾಂಗ್ಲಾದೇಶದೊಂದಿಗೆ ವಿಲೀನಗೊಳಿಸುವ ಚಟುವಟಿಕೆಗಳು ಪ್ರಾರಂಭವಾಗಬಹುದು. ಪ್ರಸ್ತುತ ಮುಸ್ಲಿಮರ ಜನಸಂಖ್ಯೆಯು ಸುಮಾರು 40 ಪ್ರತಿಶತದಷ್ಟು ತಲುಪಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸರಮಾ, ದಶಕಗಳ ಕಾಲದ ಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹೊಸ ಜನಸಂಖ್ಯಾ ರಚನೆ ಸೃಷ್ಟಿಯಾಗಿದ್ದು, ಅದು ಈಗ ಸುಮಾರು ಒಂದೂವರೆ ಕೋಟಿಗೆ ಏರಿದೆ ಎಂದರು. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 34 ಪ್ರತಿಶತ ಮುಸ್ಲಿಮರಿದ್ದರು, ಅವರಲ್ಲಿ 31 ಪ್ರತಿಶತದಷ್ಟು ಮಂದಿ ಮೂಲತಃ ಬಾಂಗ್ಲಾದೇಶದವರು ಎಂದು ದಾಖಲಾಗಿದೆ. 2027ರ ವೇಳೆಗೆ ಈ ಜನಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.

ಸಂಪಾದಕೀಯ ನಿಲುವು

ಕೇವಲ ಅಸ್ಸಾಂ ಮಾತ್ರವಲ್ಲದೆ, ಭಾರತದ ಪ್ರತಿಯೊಂದು ರಾಜ್ಯ ಮತ್ತು ಇಡೀ ದೇಶದಲ್ಲಿ ಇಷ್ಟೊಂದು ಜನಸಂಖ್ಯೆಯಾದರೆ, ಇಡೀ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಹಿಂದೂಗಳು ನಿಷ್ಕ್ರಿಯರಾಗಿದ್ದರೆ, ಅದನ್ನು ತಡೆಯುವುದು ಕಷ್ಟವಾಗಲಿದೆ!