ಹಿಂದೂ ಯುವತಿಗೆ ವಂಚಿಸಿದರೆ ಮುಸ್ಲಿಂ ಸಂಘಟನೆಗಳಿಂದ 10 ಲಕ್ಷ ಬಹುಮಾನ: ಪತ್ನಿಯಿಂದಲೇ ಪತಿಯ ಲವ್ ಜಿಹಾದ್ ಕೃತ್ಯ ಬಯಲು

ಪತಿಗೆ 20 ಲಕ್ಷ ರೂಪಾಯಿ ಸಿಕ್ಕಿದೆ

ಕೇಂದ್ರಪಾರಾ (ಒಡಿಶಾ) – ಇಲ್ಲಿ ಫರೀದಾ ಎಂಬ ಮುಸ್ಲಿಂ ಮಹಿಳೆಯೇ ತನ್ನ ಪತಿ ಸೈಜುದ್ದೀನ್ ಖಾನ್ ಮಾಡಿರುವ ಲವ್ ಜಿಹಾದ್ ಕೃತ್ಯವನ್ನು ಬಯಲಿಗೆಳೆದಿದ್ದಾಳೆ. ಈ ಬಗ್ಗೆ ಆಕೆ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ, ‘ನನ್ನ ಪತಿ ಸೈಜುದ್ದೀನ್ ಖಾನ್ ತಾನು ಅವಿವಾಹಿತ ಎಂದು ಹೇಳಿ ಹಿಂದೂ ಯುವತಿಯರನ್ನು ವಂಚಿಸುತ್ತಿದ್ದ, ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಮದುವೆಗಾಗಿ ಒತ್ತಡ ಹೇರುತ್ತಿದ್ದ. ಕೆಲವು ಮುಸ್ಲಿಂ ಸಂಘಟನೆಗಳಿಂದ ಹಿಂದೂ ಯುವತಿಯನ್ನು ಮದುವೆಯಾದರೆ ಸುಮಾರು 10 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯ ನೀಡಲಾಗುತ್ತದೆ’ ಎಂದು ಹೇಳಿದ್ದಾಳೆ.

ಫರೀದಾ ನೀಡಿದ ದೂರಿನಲ್ಲಿ, ‘ನನ್ನ ಮತ್ತು ಸೈಜುದ್ದೀನ್ ವಿವಾಹವು 2020 ರಲ್ಲಿ ನಡೆದಿದ್ದು, ನಮಗೆ ಒಂದು ಮಗುವಿದೆ. ಮಗು ಹುಟ್ಟಿದ 2 ವರ್ಷಗಳ ನಂತರ ಸೈಜುದ್ದೀನ್ ನನ್ನನ್ನು ಬಿಟ್ಟುಬಿಟ್ಟನು. ಆನಂತರ ಅವನು ಅವಿವಾಹಿತ ಎಂದು ಹೇಳಿಕೊಂಡು ಒಬ್ಬ ಹಿಂದೂ ಮಹಿಳೆಯನ್ನು ಪ್ರೇಮದ ಜಾಲಕ್ಕೆ ಬೀಳಿಸಿದನು. ಆಕೆಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಿ ನಂತರ ಮದುವೆಯಾದನು. ಸೈಜುದ್ದೀನ್ ಸ್ವಲ್ಪ ಸಮಯದ ನಂತರ ಇನ್ನೊಬ್ಬ ಮುಸ್ಲಿಂ ಮಹಿಳೆಯನ್ನೂ ಮದುವೆಯಾದನು. ಇತ್ತೀಚೆಗಷ್ಟೇ ಸೈಜುದ್ದೀನ್ ಮತ್ತೊಬ್ಬ ಹಿಂದೂ ಮಹಿಳೆಯನ್ನು ವಂಚಿಸಿ ಮದುವೆಯಾಗಿದ್ದಾನೆ. ಇಬ್ಬರು ಹಿಂದೂ ಯುವತಿಯರನ್ನು ಮದುವೆಯಾದ ಕಾರಣ ಸೈಜುದ್ದೀನ್‌ಗೆ 20 ಲಕ್ಷ ರೂಪಾಯಿ ಲಭಿಸಿದೆ. ಹಣ ಸಿಕ್ಕಿದ ಮೇಲೆ ಅವನು ಆ ಮಹಿಳೆಯರನ್ನು ಕೈಬಿಡುತ್ತಿದ್ದನು’ ಎಂದು ತಿಳಿಸಿದ್ದಾಳೆ.

ಲವ್ ಜಿಹಾದ್‌ನ ಮತ್ತೊಂದು ದೂರು ದಾಖಲು!

ನಾಗ್ಪುರಾ ಪ್ರದೇಶದ ಒಬ್ಬ ಯುವತಿಯ ತಂದೆಯು ಪೊಲೀಸರನ್ನು ಸಂಪರ್ಕಿಸಿ, ಒಬ್ಬ ಲವ್ ಜಿಹಾದಿಯು ತನ್ನ ಮಗಳನ್ನು ಪುಸಲಾಯಿಸಿ ಮದುವೆಯಾಗಿ ಹೈದರಾಬಾದ್‌ಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಕೇಂದ್ರಪಾರಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕಟಾರಿಯಾ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಷ್ಟು ದಿನ ಹಿಂದೂಗಳು ಹೇಳುತ್ತಿದ್ದ ವಿಷಯವನ್ನು ಈಗಲಾದರೂ ಪೊಲೀಸ್, ಆಡಳಿತ, ಸರಕಾರ ಮುಂತಾದವರು ನಂಬಿರಬಹುದು! ಈ ಬಗ್ಗೆ ಜಾತ್ಯತೀತವಾದಿಗಳು ಯಾಕೆ ಮೌನವಾಗಿದ್ದಾರೆ?
  • ದೇಶದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳನ್ನು ತಡೆಯಲು ಲವ್ ಜಿಹಾದಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವ ಕಾನೂನಿನ ಅಗತ್ಯವಿದೆ!