೨೦೫೧ ರ ವೇಳೆಗೆ ಮುಂಬಯಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩೦% ಕ್ಕಿಂತ ಹೆಚ್ಚಾಗಲಿದೆ!

  • ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೆನ್ಸಸ್’ ವರದಿ;

  • ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರ ಸಂಖ್ಯೆಯಿಂದ ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ

ಮುಂಬಯಿ – ಮುಂಬಯಿಯಲ್ಲಿ ಜನಸಂಖ್ಯೆಯ ರಚನೆಯು ವೇಗವಾಗಿ ಬದಲಾಗುತ್ತಿರುವ ಚಿತ್ರಣ ಹೊರಬಂದಿದೆ. ಇಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಮಾಹಿತಿಯನ್ನು ಖ್ಯಾತ ಶಿಕ್ಷಣ ಸಂಸ್ಥೆಯಾದ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೆನ್ಸಸ್’ (ಟಿ.ಐ.ಎಸ್.ಎಸ್.) ತನ್ನ ವರದಿಯಲ್ಲಿ ಹೇಳಿದೆ. ಈ ವರದಿಯ ಪ್ರಕಾರ, ಬಾಂಗ್ಲಾದೇಶದಿಂದ ನಡೆಯುತ್ತಿರುವ ನುಸುಳುವಿಕೆಯಿಂದ ಮುಂಬಯಿಯ ಸಾಮಾಜಿಕ ಭೂಪಟವೇ ಬದಲಾಗುತ್ತಿದೆ. ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನ್ ನುಸುಳುಕೋರರ ಸಂಖ್ಯೆ ಎಷ್ಟು ವೇಗವಾಗಿ ಹೆಚ್ಚಾಗುತ್ತಿದೆ ಎಂದರೆ, ೨೦೫೧ ರ ವೇಳೆಗೆ ನಗರದ ಜನಸಂಖ್ಯೆಯ ಸಮತೋಲನವು ಸಂಪೂರ್ಣವಾಗಿ ಏರುಪೇರಾಗಬಹುದು ಎಂದು ಅಂದಾಜಿಸಲಾಗಿದೆ.

೧. ಟಿ.ಐ.ಎಸ್.ಎಸ್. ಪ್ರಕಾರ, ೧೯೬೧ ರಲ್ಲಿ ಮುಂಬಯಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಸರಿಸುಮಾರು ಶೇ. ೮% ರಷ್ಟಿತ್ತು, ೨೦೧೧ ರಲ್ಲಿ ಶೇ. ೨೧% ಕ್ಕೆ ತಲುಪಿದೆ. ಇದು ಹೀಗೇ ಮುಂದುವರೆದರೆ, ೨೦೫೧ ರ ವೇಳೆಗೆ ಈ ಸಂಖ್ಯೆ ಶೇ. ೩೦% ರವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

೨. ಮುಂಬಯಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಕೆಲವು ಬಾಂಗ್ಲಾದೇಶಿ ನುಸುಳುಕೋರರು ಇಲ್ಲಿ ಗಳಿಸಿದ ಹಣದ ಬಹುದೊಡ್ಡ ಭಾಗವನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದು ಕೂಡ ಈ ವರದಿಯಲ್ಲಿ ತಿಳಿಸಲಾಗಿದೆ.

ಹಿಂದೂಗಳ ಜನಸಂಖ್ಯೆಯ ಪ್ರಮಾಣ ಶೇ. ೫೪% ಕ್ಕಿಂತ ಕೆಳಗಿಳಿಯುವ ಸಾಧ್ಯತೆ!

ಈ ಹಿಂದೆ ನವೆಂಬರ್ ೨೦೨೪ ರ ಮಧ್ಯಂತರ ವರದಿಯಲ್ಲಿಯೂ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರ ಹೆಚ್ಚುತ್ತಿರುವ ಸಂಖ್ಯೆಯು ನಗರದ ಸಾಮಾಜಿಕ ಮತ್ತು ಆರ್ಥಿಕ ಚೌಕಟ್ಟಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಮೂದಿಸಲಾಗಿತ್ತು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ನಡೆಯುತ್ತಿರುವ ಅಕ್ರಮ ವಲಸೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗಿತ್ತು. ಅದರಂತೆ ೨೦೫೧ ರ ವೇಳೆಗೆ ಮುಂಬಯಿಯಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೫೪% ಕ್ಕಿಂತ ಕೆಳಗಿಳಿಯುವ ಮತ್ತು ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ. ೩೦% ರಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.

ಸಂಪಾದಕೀಯ ನಿಲುವು

ಕೇವಲ ಮುಂಬಯಿಯಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಮುಂಬರುವ ಜನಗಣತಿಯಲ್ಲಿ ಇದರ ಸ್ಪಷ್ಟ ಚಿತ್ರಣ ಹೊರಬರಲಿದೆ. ೨೦೪೭ ರ ವೇಳೆಗೆ ಜನಸಂಖ್ಯೆಯ ಆಧಾರದ ಮೇಲೆ ಭಾರತವನ್ನು ‘ಇಸ್ಲಾಮಿ ದೇಶ’ವನ್ನಾಗಿ ಮಾಡುವ ಪಿತೂರಿಯು ಈಗಾಗಲೇ ಬಯಲಾಗಿದೆ. ಆದ್ದರಿಂದ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸುವುದನ್ನು ಬಿಟ್ಟು ಬೇರೆ ಪರ್ಯಾಯವೇ ಇಲ್ಲ.