ಬೆಂಗಳೂರಿನ ಉದ್ಯನಿ ಕೆ. ರಘುನಾಥ ಅವರ ನಿಗೂಢ ಸಾವಿನ ಪ್ರಕರಣ

ಬೆಂಗಳೂರು – ಸುಮಾರು ೬ ವರ್ಷಗಳ ನಂತರ ನಗರದ ಉದ್ಯನಿ ಕೆ. ರಘುನಾಥ ಅವರ ರಹಸ್ಯಮಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮಾಜಿ ಸಂಸದ ಡಿ.ಕೆ. ಆದಿಕೇಶವಲು ನಾಯ್ಡು ಅವರ ಪುತ್ರ ಡಿ.ಎ. ಶ್ರೀನಿವಾಸ, ಪುತ್ರಿ ಡಿ.ಎ. ಕಲ್ಪಜಾ ಮತ್ತು ಕರ್ನಾಟಕ ಪೊಲೀಸ್ ಉಪವರಿಷ್ಠಾಧಿಕಾರಿ ಎಸ್.ವೈ. ಮೋಹನ ಅವರನ್ನು ಬಂಧಿಸಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

೧. ಕೆ. ರಘುನಾಥ ಅವರು ಮಾಜಿ ಸಂಸದ ನಾಯ್ಡು ಅವರ ಆಪ್ತ ಸಹಾಯಕ ಎಂದು ಪರಿಗಣಿಸಲ್ಪಟ್ಟಿದ್ದರು; ಆದರೆ ೨೦೧೯ ರಲ್ಲಿ ವೈಟ್ ಫೀಲ್ಡ್ ನ ಅತಿಥಿಗೃಹವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು; ಆದರೆ ನಂತರ ಅವರ ಪತ್ನಿ ಮತ್ತು ಪುತ್ರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು.
೨. ‘ಸಿಬಿಐ’, ಆರೋಪಿಗಳನ್ನು ಕ್ರಿಮಿನಲ್ ಪಿತೂರಿ, ವಂಚನೆ, ಸಾಕ್ಷ್ಯ ನಾಶಪಡಿಸುವುದು ಮತ್ತು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿದ ಗಂಭೀರ ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದೆ, ಎಂದು ಹೇಳಿದೆ.
೩. ೨೦೨೨ ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಈ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ‘ಸಿಬಿಐ’ಗೆ ವಹಿಸಲಾಗಿತ್ತು. ತದನಂತರ ಸರ್ವೋಚ್ಚ ನ್ಯಾಯಾಲಯವೂ ‘ಸಿಬಿಐ’ ತನಿಖೆಗೆ ಅನುಮತಿ ನೀಡಿತ್ತು.
೪. ‘ಸಿಬಿಐ’ ತನಿಖೆಯಲ್ಲಿ, ಕೆ. ರಘುನಾಥ ಅವರನ್ನು ಆರೋಪಿಗಳು ಎರಡು ದಿನಗಳ ಕಾಲ ಅತಿಥಿಗೃಹದಲ್ಲಿ ಬಲವಂತವಾಗಿ ಇರಿಸಿದ್ದರು. ನಂತರ ಅವರ ಹತ್ಯೆ ಮಾಡಿ, ಅದು ಆತ್ಮಹತ್ಯೆಯಂತೆ ಬಿಂಬಿಸಿದ್ದರು, ಎಂದು ತಿಳಿಸಿದ್ದಾರೆ.
೫. ಎಲ್ಲಾ ಆರೋಪಿಗಳನ್ನು ಡಿಸೆಂಬರ್ ೨೯, ೨೦೨೫ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ‘ಸಿಬಿಐ’ ಮುಂದಿನ ತನಿಖೆಯನ್ನು ನಡೆಸುತ್ತಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !