ಬೆಂಗಳೂರಿನಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ತಡೆದು ಹಸುಗಳ ಬಿಡುಗಡೆ! Bengaluru Cow Smuggling

  • ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರ ಅಭಿನಂದನೀಯ ಕೃತ್ಯ!

  • ಟ್ರಕ್ ತಡೆದು ತೋರಿಸುವಂತೆ ಕಸಾಯಿಖಾನೆಯ ಮಾಲೀಕನಿಂದ ಸವಾಲು

ಬೆಂಗಳೂರು – ಇಲ್ಲಿನ ಬನಶಂಕರಿ ಪ್ರದೇಶದಲ್ಲಿ ಮಧ್ಯರಾತ್ರಿ ೨ ಗಂಟೆಗೆ ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಗೋವುಗಳನ್ನು ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದ ಟ್ರಕ್ ಅನ್ನು ತಡೆದು ಹಸುಗಳನ್ನು ರಕ್ಷಿಸಿದರು. ರಾಷ್ಟ್ರರಕ್ಷಣಾ ದಳದ ಪುನೀತ್ ಕೆರೆಹಳ್ಳಿ ಅವರು ‘ಎಕ್ಸ್’ (X) ವೇದಿಕೆಯಲ್ಲಿ ವೀಡಿಯೊವನ್ನು ಪ್ರಸಾರ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬನಶಂಕರಿ ಕಸಾಯಿಖಾನೆಯ ಮಾಲೀಕ ಫಯಾಜ್, ರಾಷ್ಟ್ರರಕ್ಷಣಾ ದಳಕ್ಕೆ, ‘ನಿಮ್ಮ ತಂಡದಲ್ಲಿ ಪೌರುಷವಿದ್ದರೆ, ಬನಶಂಕರಿ ಪ್ರದೇಶದಲ್ಲಿ ನಮ್ಮ ವಾಹನವನ್ನು ತಡೆದು ತೋರಿಸಿ’ ಎಂದು ಸವಾಲು ಹಾಕಿದ್ದನು. ಈ ಸವಾಲನ್ನು ಸ್ವೀಕರಿಸಿ ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಈ ಕಾರ್ಯಾಚರಣೆಯನ್ನು ನಡೆಸಿದರು. ರಾಷ್ಟ್ರರಕ್ಷಣಾ ದಳದ ಮಹಿಳಾ ಕಾರ್ಯಕರ್ತೆಯರು ಟ್ರಕ್ ಅನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ, ಟ್ರಕ್ ಚಾಲಕ ಮತ್ತು ಇತರ ಸಿಬ್ಬಂದಿ ಓಡಿಹೋದರು. ನಂತರ ಹಸುಗಳನ್ನು ರಕ್ಷಿಸಿ ಗೋಶಾಲೆಗೆ ಒಪ್ಪಿಸಲಾಯಿತು.

ಸಂಪಾದಕೀಯ ನಿಲುವು

ಇಂತಹ ಕೃತ್ಯವನ್ನು ನಾಗರಿಕರು ಏಕೆ ಮಾಡಬೇಕಾಗುತ್ತದೆ? ಪೊಲೀಸರು ಮತ್ತು ಆಡಳಿತಕ್ಕೆ ಮಾಹಿತಿ ಸಿಗುವುದಿಲ್ಲವೇ?