ಸೇನೆಯ ಸೌತ್-ವೆಸ್ಟರ್ನ್ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರ ಹೇಳಿಕೆ

ಹಿಸಾರ್ (ಹರಿಯಾಣ) – ಒಂದುವೇಳೆ, ‘ಆಪರೇಷನ್ ಸಿಂಧೂರ್’ನಂತಹ ಯುದ್ಧವು ರಷ್ಯಾ ಮತ್ತು ಉಕ್ರೇನ್ ಯುದ್ಧದಂತೆ ದೀರ್ಘಕಾಲ ನಡೆದರೆ, ಈ ಅವಧಿಯಲ್ಲಿ ನಮಗೆ ಮಾಜಿ ಸೈನಿಕರ ಅಗತ್ಯ ಉಂಟಾಗಬಹುದು. ಒಂದು ವ್ಯವಸ್ಥೆಯ ಮೂಲಕ ಅವರನ್ನು ಮತ್ತೆ ದೇಶ ಸೇವೆಗೆ ತರಬಹುದು; ಏಕೆಂದರೆ ಅವರು ತರಬೇತಿ ಪಡೆದ ಮಾನವಶಕ್ತಿಯಾಗಿದ್ದಾರೆ. ಅವರಿಗೂ ದೇಶದಲ್ಲಿ ಮತ್ತೆ ನೌಕರಿ ಮಾಡುವ ಅವಕಾಶ ಸಿಗಬಹುದು ಎಂದು ಸೇನೆಯ ಸೌತ್-ವೆಸ್ಟರ್ನ್ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಇಲ್ಲಿನ ಸೇನಾ ನೆಲೆಯಲ್ಲಿ ಮಾಜಿ ಸೈನಿಕರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಮಾತು ಮುಂದುವರೆಸಿ, ‘ಆಪರೇಷನ್ ಸಿಂಧೂರ್’ ಸಮಯದಲ್ಲಿ, ನಮ್ಮ ಮೇಲೆ ಕಠಿಣ ಸಮಯ ಬಂದಿತ್ತು. ದೇಶದಲ್ಲಿ ಭಯೋತ್ಪಾದಕ ದಾಳಿಯಾಗಿತ್ತು ಮತ್ತು ಅದರ ನಂತರ ಇಡೀ ದೇಶವು ಸೇನೆಯ ಕಾರ್ಯಾಚರಣೆಯತ್ತ ನೋಡುತ್ತಿತ್ತು. ನಾವು ದೀರ್ಘಕಾಲದ ಯುದ್ಧಕ್ಕಾಗಿ ಸಿದ್ಧತೆ ಮಾಡುತ್ತಿದ್ದೆವು. ನಾವು ಮಾಜಿ ಸೈನಿಕರ ಪಟ್ಟಿಯನ್ನು ಸಿದ್ಧಪಡಿಸಿದ್ದೆವು; ಆದರೆ ನಾವು ನೋಡಿದಂತೆ, ಯುದ್ಧವು ಬಹಳ ಬೇಗನೆ ಮುಗಿಯಿತು. ೯೦ ಗಂಟೆಗಳಲ್ಲಿ ಶತ್ರುಗಳು ಮಂಡಿಯೂರಿದರು.
ಯುದ್ಧದ ವಿಧಾನ ಬದಲಾಗಿದೆ!
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಮಾತು ಮುಂದುವರೆಸುತ್ತಾ, ಮೊದಲು ಯುದ್ಧವನ್ನು ಕೇವಲ ಸೈನ್ಯ ಮಾತ್ರ ಹೋರಾಡುತ್ತಿತ್ತು. ಮುಂದಿನ ದಿನಗಳಲ್ಲಿ ಯುದ್ಧದ ವಿಧಾನ ಬದಲಾಗುತ್ತಿದೆ. ಇದನ್ನು ‘ಸಂಪರ್ಕವಿಲ್ಲದ ಯುದ್ಧ’ ಮತ್ತು ‘ಸಂಪರ್ಕ ಯುದ್ಧ’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸೈಬರ್ ದಾಳಿಗಳು ನಡೆಯುತ್ತಿವೆ; ಆದರೆ ಎಲ್ಲಿಂದ ನಡೆಯುತ್ತಿವೆ ಎಂಬುದು ತಿಳಿದಿಲ್ಲ. ಇಂದಿನ ಯುದ್ಧದಲ್ಲಿ ಇಡೀ ದೇಶವೇ ಭಾಗವಹಿಸುತ್ತದೆ. ನಾಗರಿಕ ಮತ್ತು ಸೇನಾ ಪಡೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇದರ ಜವಾಬ್ದಾರಿ ನಾಗರಿಕ ಆಡಳಿತದ ಮೇಲಿರುತ್ತದೆ.
ಭಾರತೀಯ ಸೇನೆಯು ತನ್ನದೇ ಆದ ೨೦ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಿದೆ!
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು, ದೇಶದಲ್ಲಿ ಸೇನೆಯು ತನ್ನದೇ ಆದ ೨೦ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಿದೆ. ಇವುಗಳ ಸ್ಥಳಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿ ಮಾಜಿ ಸೈನಿಕರು ಮತ್ತು ಸೇವೆ ಸಲ್ಲಿಸುತ್ತಿರುವ ಸೈನಿಕರು ಚಿಕಿತ್ಸೆ ಪಡೆಯಬಹುದು. ಈ ಸಂಬಂಧ ಒಂದು ಪ್ರಾಯೋಗಿಕ ಯೋಜನೆ ನಡೆಯುತ್ತಿದೆ. ೭೦ ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಾಜಿ ಸೈನಿಕರಿಗೆ ಮನೆಬಾಗಿಲಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಬ್ಲಾಕ್ ಮಟ್ಟದಲ್ಲಿ ಸ್ವಯಂಸೇವಕರನ್ನು ನೇಮಿಸಲಾಗುವುದು. ಸಂಪೂರ್ಣ ವ್ಯವಸ್ಥೆಯನ್ನು ‘ಸ್ಪರ್ಶ’ ಯೋಜನೆಯಡಿಯಲ್ಲಿ ಜೋಡಿಸಲಾಗುತ್ತಿದೆ, ಇದರಿಂದ ಸೈನಿಕರು ಒಂದೇ ಸ್ಥಳದಿಂದ ವೈದ್ಯಕೀಯ ಹಕ್ಕುಗಳನ್ನು ಸಲ್ಲಿಸಬಹುದು.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!