ಪಣಜಿಯಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿರುವ ಹೋರಾಟಗಾರರಿಗೆ ನಾಳೆ ಶ್ರೀವಿದ್ಯಾ ಪ್ರತಿಷ್ಠಾನದಿಂದ ಸನ್ಮಾನ ಸಮಾರಂಭ

ಶ್ರೀ. ಪ್ರಮೋದ ಮುತಾಲಿಕ್

ಪಣಜಿ, ನವೆಂಬರ್ ೧೮ (ವಾರ್ತೆ) – ಸಾಂಬಾಜಿನಗರ (ವಾಸ್ಕೋ) ದ ಶ್ರೀವಿದ್ಯಾ ಪ್ರತಿಷ್ಠಾನ ಸಂಸ್ಥೆಯಿಂದ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಅನ್ಯಾಯ, ದಬ್ಬಾಳಿಕೆ ಮತ್ತು ಸ್ವಾತಂತ್ರ್ಯದ ಮೇಲಿನ ಆಕ್ರಮಣದ ವಿರುದ್ಧ ನಿರ್ಭೀತಿಯಿಂದ ನಿಂತಹೋರಾಟಗಾರರ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ನವೆಂಬರ್ ೨೦, ೨೦೨೫ ರಂದು ಮಧ್ಯಾಹ್ನ ೪ ಗಂಟೆಗೆ ಪಣಜಿಯ ಕ್ರೌನ್ (ಝಾಂಟ್ಯೆ) ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಸಾಮಾಜಿಕ ಕಾರ್ಯಕರ್ತರಾದ ಜಯಂತ ಮೋಹನ್ ಮಿರಿಂಗ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯ ಈ ಕರಾಳ ಅಧ್ಯಾಯದಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ದೃಢವಾಗಿ ನಿಂತ ಹೋರಾಟಗಾರರ ಪರಮೋಚ್ಚ ತ್ಯಾಗ, ಹೋರಾಟ ಮತ್ತು ಧೈರ್ಯಕ್ಕೆ ೫೦ ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭವನ್ನು ಸ್ಮರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗೋವಾದ ಹೋರಾಟಗಾರರನ್ನು ಭವ್ಯವಾಗಿ ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಒಂದು ವಿಶೇಷ ಕೈಪಿಡಿಯನ್ನು ಪ್ರಕಟಿಸಲಾಗುವುದು ಮತ್ತು ಈ ಕೈಪಿಡಿಯ ಮೂಲಕ ತುರ್ತು ಪರಿಸ್ಥಿತಿಯ ಕಾಲದ ಘಟನೆಗಳು, ನೆನಪುಗಳು ಮತ್ತು ಪ್ರೇರಣೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶವಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಉಪಸ್ಥಿತರಿರಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.