ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿಯಲ್ಲಿ ಘರ್ಷಣೆ ೬ ನಕ್ಸಲೀಯರ ಸಾವು

ಒಬ್ಬನನ್ನು ಜೀವಂತ ಸೆರೆ ಹಿಡಿಯಲಾಗಿದೆ: ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ವಶಕ್ಕೆ!

ಬಿಜಾಪುರ (ಛತ್ತೀಸ್‌ಗಢ) – ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿಯಲ್ಲಿರುವ ಬಿಜಾಪುರ ಜಿಲ್ಲೆಯಲ್ಲಿ ಯೋಧರು ೬ ನಕ್ಸಲೀಯರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇವರಲ್ಲಿ ೩ ಮಹಿಳಾ ನಕ್ಸಲೀಯರು ಸೇರಿದ್ದಾರೆ. ಘಟನಾ ಸ್ಥಳದಿಂದ ಯೋಧರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಯೋಧರು ಒಬ್ಬ ಪ್ರಮುಖ ನಕ್ಸಲ್ ನಾಯಕನನ್ನು ಸುತ್ತುವರಿದಿದ್ದಾರೆ ಎಂದು ವರದಿಯಾಗಿದೆ. ಈ ಎನ್‌ಕೌಂಟರ್ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಡೆದಿದೆ.