ಉತ್ತರ ಪ್ರದೇಶದ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ‘ವಂದೇ ಮಾತರಂ’ ಹೇಳುವುದು ಕಡ್ಡಾಯ Vande Mataram

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಘೋಷಣೆ

ಗೋರಖಪುರ (ಉತ್ತರ ಪ್ರದೇಶ) – ‘ವಂದೇ ಮಾತರಂ’ ರಾಷ್ಟ್ರಗೀತೆಯ ವಿವಾದದ ಹಿನ್ನೆಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ‘ವಂದೇ ಮಾತರಂ’ ಹೇಳುವುದನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿದರು. ಸರ್ದಾರ ವಲ್ಲಭಭಾಯಿ ಪಟೇಲ ಅವರ 150 ನೇ ಜಯಂತಿ ಮತ್ತು ರಾಷ್ಟ್ರಗೀತೆ ‘ವಂದೇ ಮಾತರಂ’ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಏಕತಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘೋಷಣೆ ಮಾಡಿದರು.

ಯಾರಾದರೂ ಮಹಮ್ಮದ್ ಅಲಿ ಜಿನ್ನಾ ಅವರಂತೆ ಉದಯಿಸಿದರೆ, ಅವರನ್ನು ಹೂಳಲಾಗುವುದು!

ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ದೇಶದ ಸಮಗ್ರತೆಗೆ ಧಕ್ಕೆ ತರಲು ಯಾರಾದರೂ ಮಹಮ್ಮದ್ ಅಲಿ ಜಿನ್ನಾ ಅವರಂತೆ ಉದಯಿಸಿದರೆ, ಅವರನ್ನು ಹೂಳಲಾಗುವುದು ಎಂದರು. ದೇಶದಲ್ಲಿ ಮತ್ತೆ ವಿಭಜನೆಯ ಪರಿಸ್ಥಿತಿ ನಿರ್ಮಾಣವಾಗಲು ಬಿಡಬಾರದು. ಇಂದು ಭಾಷೆ ಮತ್ತು ಜಾತಿಯ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸಲಾಗುತ್ತಿದೆ; ಆದರೆ ಯಾವುದೇ ಧರ್ಮ ಅಥವಾ ಜಾತಿ ರಾಷ್ಟ್ರಕ್ಕಿಂತ ದೊಡ್ಡದಾಗಿರಲು ಸಾಧ್ಯವಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ದೇಶದ ಎಲ್ಲ ರಾಜ್ಯಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಕೇಂದ್ರ ಸರಕಾರವು ಇಡೀ ದೇಶಕ್ಕೆ ‘ವಂದೇ ಮಾತರಂ’ ಕಡ್ಡಾಯಗೊಳಿಸಬೇಕು!
  • ಈಗ, ಇಲ್ಲಿ ಯಾರಾದರೂ ‘ವಂದೇ ಮಾತರಂ’ ಹೇಳಲು ನಿರಾಕರಿಸಿದರೆ, ಅವರನ್ನು ಶಾಲೆ ಅಥವಾ ಕಾಲೇಜಿನಿಂದ ಹೊರಹಾಕಬೇಕು ಮತ್ತು ಯಾವುದೇ ಇತರ ಶಾಲೆ ಅಥವಾ ಕಾಲೇಜಿಗೆ ಪ್ರವೇಶ ನೀಡುವುದನ್ನು ನಿಷೇಧಿಸಬೇಕು!
  • ಕೇವಲ ಶಾಲೆ ಮತ್ತು ಕಾಲೇಜುಗಳಲ್ಲಿ ಮಾತ್ರವಲ್ಲದೆ, ಸರಕಾರದ ಅನುದಾನ ಪಡೆಯುವ ಎಲ್ಲ ಮದರಸಾಗಳಲ್ಲಿಯೂ ‘ವಂದೇ ಮಾತರಂ’ ಕಡ್ಡಾಯಗೊಳಿಸಬೇಕು. ಯಾರಾದರೂ ಇದನ್ನು ಮಾಡದಿದ್ದರೆ, ಅವರ ಅನುದಾನವನ್ನು ನಿಲ್ಲಿಸಿ ಮತ್ತು ನೋಂದಣಿಯನ್ನೂ ರದ್ದುಗೊಳಿಸಬೇಕು.