‘ಅತ್ಯಂತ ಬಡತನ ಮುಕ್ತ’ವಾದ ದೇಶದ ಮೊದಲ ರಾಜ್ಯ ಕೇರಳ! – ಮುಖ್ಯಮಂತ್ರಿ ವಿಜಯನ್ ಘೋಷಣೆ

ತಿರುವನಂತಪುರಂ (ಕೇರಳ) – ಕೇರಳ ರಾಜ್ಯವು ದೇಶದ ಮೊದಲ ‘ಅತ್ಯಂತ ಬಡತನ ಮುಕ್ತ’ ರಾಜ್ಯವಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ಘೋಷಿಸಿದರು.

೧. ರಾಜ್ಯದಲ್ಲಿನ ಅತ್ಯಂತ ಬಡತನವನ್ನು ಹೋಗಲಾಡಿಸಲು ವಿಜಯನ್ ಸರಕಾರವು ೨೦೨೧ ರಲ್ಲಿ ‘ಅತ್ಯಂತ ಬಡತನ ನಿರ್ಮೂಲನ ಯೋಜನೆ’ಯನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದ ಅಡಿಯಲ್ಲಿ ೬೪ ಸಾವಿರದ ೬ ಕುಟುಂಬಗಳನ್ನು ಗುರುತಿಸಲಾಗಿತ್ತು. ಕಳೆದ ವರ್ಷ ಈ ಕುಟುಂಬಗಳನ್ನು ತೀವ್ರ ಬಡತನದಿಂದ ಹೊರತರಲಾಗಿದೆ.

೨. ಈ ಘೋಷಣೆಯ ನಂತರ, ಮುಖ್ಯಮಂತ್ರಿಯವರ ಹೇಳಿಕೆ ಸುಳ್ಳು ಎಂದು ಹೇಳಿ ವಿರೋಧ ಪಕ್ಷದವರು ಸದನ ಕಲಾಪವನ್ನು ಬಹಿಷ್ಕರಿಸಿದರು. ವಿಧಾನಸಭಾ ವಿಶೇಷ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಎಲ್ಲ ಶಾಸಕರು ಸದನದಿಂದ ಹೊರನಡೆದರು.

೩. ವಿರೋಧ ಪಕ್ಷದವರ ಆರೋಪಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ವಿಜಯನ್, ನಾವು ಕಾರ್ಯರೂಪಕ್ಕೆ ತರಲು ಸಾಧ್ಯವಾದುದನ್ನು ಮಾತ್ರ ಮಾತನಾಡುತ್ತೇವೆ. ನಾವು ಹೇಳಿದ್ದನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಇದು ನಮ್ಮ ವಿರೋಧ ಪಕ್ಷದ ನಾಯಕರಿಗೆ ಉತ್ತರವಾಗಿದೆ.