
ರತ್ನಾಗಿರಿ – ಜಿಲ್ಲೆಯ ಲೋಟೆಯಲ್ಲಿರುವ ‘ಆಧ್ಯಾತ್ಮಿಕ ವಾರಕರಿ ವಸತಿ ಗುರುಕುಲ’ದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹ.ಭ.ಪ. ಭಗವಾನ ಮಹಾರಾಜ್ ಕೋಕರೆ ಮತ್ತು ಅವರ ಸಹಾಯಕ ಪ್ರೀತೇಶ ಪ್ರಭಾಕರ ಕದಮ ಅವರ ವಿರುದ್ಧ ಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ‘ಪೀಡಿತ ಬಾಲಕಿ ಕಳೆದ ಕೆಲವು ದಿನಗಳಿಂದ ಆಧ್ಯಾತ್ಮಿಕ ಶಿಕ್ಷಣಕ್ಕಾಗಿ ಗುರುಕುಲದಲ್ಲಿ ವಾಸಿಸುತ್ತಿದ್ದಳು. ಈ ವೇಳೆ ಭಗವಾನ ಮಹಾರಾಜ ಕೋಕರೆ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾರೆ. ಆಕೆಗೆ ನಾಚಿಕೆಯಾಗುವಂತೆ ಕೃತ್ಯ ಎಸಗಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಘಟನೆ ನಡೆದ ನಂತರ ಸಂತ್ರಸ್ತೆ ಗುರುಕುಲದ ಒಬ್ಬ ಸದಸ್ಯನಿಗೆ ಈ ವಿಷಯ ತಿಳಿಸಿದಾಗ, “ಈ ಬಗ್ಗೆ ಎಲ್ಲಿಯೂ ಏನೂ ಹೇಳಬೇಡ. ಮಹಾರಾಜರಿಗೆ ಸಾಮಾಜಿಕ ಮತ್ತು ರಾಜಕೀಯ ಸಂಪರ್ಕಗಳಿವೆ. ನೀನು ಯಾರಿಗಾದರೂ ಹೇಳಿದರೆ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಿನಗೆ ಅಪಕೀರ್ತಿಯಾಗುತ್ತದೆ,” ಎಂದು ಆತ ಹೇಳಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸೌ. ಕೋಕರೆ ಅವರ ಸ್ಪಷ್ಟನೆಗೋಶಾಲೆ ತೆಗೆಯಲು ಮಹಾರಾಜರನ್ನು ಸಿಲುಕಿಸುವ ಪಿತೂರಿ! ಕಳೆದ ೧೭ ವರ್ಷಗಳಿಂದ ನಾವು ಇಲ್ಲಿ ಗೋಶಾಲೆಯನ್ನು ನಡೆಸುತ್ತಿದ್ದೇವೆ. ಗೋಶಾಲೆ ಮುಚ್ಚಿಸಲು ಅನೇಕರು, ರಾಜಕೀಯ ವ್ಯಕ್ತಿಗಳು ಕೂಡ ಬಹಳಷ್ಟು ಪ್ರಯತ್ನಿಸಿದರು. ನಾವು ಇವರೆಲ್ಲರನ್ನೂ ಧೈರ್ಯದಿಂದ ಎದುರಿಸಿ ಇಲ್ಲಿ ನಿಂತಿದ್ದೇವೆ. ಈಗ ಗೋಶಾಲೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ತಿಳಿದು ಬಂದ ಕಾರಣ, ಮಹಾರಾಜರನ್ನೇ ತೆಗೆದುಹಾಕಲು ಮತ್ತು ಅವರನ್ನು ಕುಗ್ಗಿಸಲು ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ ಎಂದು ಹ.ಭ.ಪ. ಭಗವಾನ್ ಮಹಾರಾಜ ಅವರ ಪತ್ನಿ ಶ್ರೀಮತಿ ಕೋಕರೆ ಹೇಳಿಕೆ ನೀಡಿದ್ದಾರೆ. ಹ.ಭ.ಪ. ಭಗವಾನ ಮಹಾರಾಜ ಕೋಕರೆ ಅವರ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಕುರಿತು ಅವರು ಮಾತನಾಡುತ್ತಿದ್ದರು. ಸೌ. ಕೋಕರೆ ಮಾತು ಮುಂದುವರೆಸಿ, ಕಳೆದ ವರ್ಷದಿಂದ ನಾವು ಇಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಲು ಗುರುಕುಲವನ್ನು ಪ್ರಾರಂಭಿಸಿದ್ದೇವೆ. ೬ ತಿಂಗಳು ಇಲ್ಲಿ ಎಲ್ಲವೂ ಸರಿಯಾಗಿತ್ತು; ಆದರೆ ಇದ್ದಕ್ಕಿದ್ದಂತೆ ಏನಾಯಿತು? ಯಾರೋ ಮಹಾರಾಜರ ವಿರುದ್ಧ ಈ ಷಡ್ಯಂತ್ರವನ್ನು ಮಾಡಿದ್ದಾರೆ. ಮಹಾರಾಜರು ಕುಗ್ಗಿದರೆ, ಗೋಶಾಲೆಯನ್ನೂ ತೆಗೆದುಹಾಕಬಹುದು. ಇದು ಷಡ್ಯಂತ್ರವಾಗಿದ್ದು, ಮಹಾರಾಜರನ್ನು ಇದರಲ್ಲಿ ಸಿಲುಕಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ. ಆ ಹುಡುಗಿ ತುಂಬಾ ಒಳ್ಳೆಯವಳು. ಬೇಕಾದರೆ ನೀವು ಎಲ್ಲಾ ಮಕ್ಕಳ ವಿಚಾರಣೆ ಮಾಡಬಹುದು. ಇಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಮಹಾರಾಜರನ್ನು ಸಿಲುಕಿಸಲು ಇದೊಂದು ಪಿತೂರಿ. ಸಂಪೂರ್ಣ ರಾಜಕೀಯ ನಡೆಯುತ್ತಿದೆ, ಎಂದು ಹೇಳಿದರು. |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !