ನ್ಯಾಯ ಸಿಗದೆ ಪಕ್ಷಗಾರನೊಬ್ಬ ನ್ಯಾಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ! : Suicide

ಕಳೆದ ೨೭ ವರ್ಷಗಳಿಂದ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಟ!

ಚಿತ್ರ ಕೃಪೆ: Lokmat.com

ಪುಣೆ – ಕಳೆದ ೨೭ ವರ್ಷಗಳಿಂದ ನಡೆಯುತ್ತಿದ್ದ ಜಮೀನು ವಿವಾದದ ಮೊಕದ್ದಮೆಯಲ್ಲಿ ನ್ಯಾಯ ಸಿಗದೆ ಬೇಸತ್ತ ನಾಮದೇವ ಜಾಧವ ಎಂಬ ಪಕ್ಷಗಾರ ಪುಣೆ ಜಿಲ್ಲಾ ನ್ಯಾಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಕದ್ದಮೆ ನಡೆಯುತ್ತಿಲ್ಲ ಮತ್ತು ನ್ಯಾಯ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಜಾಧವ ಅವರು ಆತ್ಮಹತ್ಯೆ ಮಾಡಿಕೊಂಡು ಜೀವನ ಕೊನೆಗೊಳಿಸಿದರು ಎಂದು ಹೇಳಲಾಗುತ್ತಿದೆ. ಮೇಲಿನ ಕಾರಣಗಳಿಂದ ಅವರು ಮಾನಸಿಕ ಒತ್ತಡದಲ್ಲಿದ್ದರು. ಅವರು ಪುಣೆಯ ವಡಕಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಘಟನೆಯ ಮಾಹಿತಿ ತಿಳಿದ ಕೂಡಲೇ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಸೂನ್ ಆಸ್ಪತ್ರೆಗೆ ಕಳುಹಿಸಿದರು.