ಒಂದು ವೇಳೆ ‘ಎ.ಐ.ಎಂ.ಐ.ಎಂ.’ ಗೋರಕ್ಷಣೆಯನ್ನು ಪ್ರತಿಪಾದಿಸಿದರೆ, ನಾವು ಅವರಿಗೆ ಬೆಂಬಲ ನೀಡುತ್ತೇವೆ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

(ಎ.ಐ.ಎಂ.ಐ.ಎಂ. ಎಂದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್, ಅಂದರೆ ಅಖಿಲ ಭಾರತೀಯ ಮುಸ್ಲಿಮರ ಏಕತಾ ಸಂಘ)

ಪಾಟಲೀಪುತ್ರ (ಬಿಹಾರ) – ಗೋರಕ್ಷಣೆಯನ್ನು ಪ್ರತಿಪಾದಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಸಂಘಟನೆಗೆ, ‘ಎ.ಐ.ಎಂ.ಐ.ಎಂ.’ ಪಕ್ಷಕ್ಕಾದರೂ ನಾವು ಬೆಂಬಲ ನೀಡುತ್ತೇವೆ. ಹಿಂದೂ ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುವ ಜನರು ಗೋರಕ್ಷಣೆಯ ವಿಷಯದಲ್ಲಿ ಏಕೆ ಮೌನವಾಗಿದ್ದಾರೆ? ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪ್ರಶ್ನಿಸಿದ್ದಾರೆ. ಅವರು ರಾಜ್ಯದ ಶಿವಹರ್‌ಗೆ ಬಂದಿದ್ದರು.

ಶಂಕರಾಚಾರ್ಯರು ಮಾತು ಮುಂದುವರೆಸಿ, ಹಸುಗಳು ಯಾವುದೇ ನಿರ್ದಿಷ್ಟ ಜಾತಿ, ಪಂಥ ಅಥವಾ ಪಕ್ಷಕ್ಕೆ ಸೇರಿಲ್ಲ, ಬದಲಿಗೆ ಅವು ಇಡೀ ಭಾರತದ ಗುರುತಾಗಿದೆ. ಹಸುವಿನ ಹೆಸರಿನಲ್ಲಿ ರಾಜಕೀಯ ಮಾಡುವವರು ಗೋಸೇವೆಗಾಗಿ ವಾಸ್ತವವಾಗಿ ಏನು ಮಾಡುತ್ತಿದ್ದಾರೆ? ಹಸುವು ಭಾರತೀಯ ಸಂಸ್ಕೃತಿ, ಆರ್ಥಿಕತೆ ಮತ್ತು ಪರಿಸರದ ತಳಪಾಯವಾಗಿದೆ. ಗೋರಕ್ಷಣೆಯೇ ಇಡೀ ರಾಷ್ಟ್ರದ ಕರ್ತವ್ಯವಾಗಿದೆ. ನಮ್ಮ ನಿಷ್ಠೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಇಲ್ಲ, ಬದಲಿಗೆ ಗೋಮಾತೆ ಮತ್ತು ಸನಾತನ ಧರ್ಮದೊಂದಿಗೆ ಇದೆ. ನಾವು ಯಾವುದೇ ಪಕ್ಷದ ವಿರೋಧಿಗಳಲ್ಲ, ಎಂದು ಹೇಳಿದರು.