ಗಂಡನ ವಿವಾಹೇತರ ಸಂಬಂಧದಿಂದ ವಿವಾಹ ಮುರಿದುಬಿದ್ದರೆ, ಪತ್ನಿ ಪರಿಹಾರ ಕೇಳಬಹುದು ! – ದೆಹಲಿ ಉಚ್ಚ ನ್ಯಾಯಾಲಯ Delhi High Court Order

ನವ ದೆಹಲಿ – ಓರ್ವ ಮಹಿಳೆಯ ಗಂಡನಿಗೆ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವಿದ್ದರೆ ಮತ್ತು ಆ ಕಾರಣದಿಂದ ಗಂಡ-ಹೆಂಡತಿಯರ ನಡುವಿನ ಸಂಬಂಧ ಮುರಿದುಬಿದ್ದರೆ, ಪತ್ನಿಯು ಆ ಮಹಿಳೆಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ದೆಹಲಿ ಉಚ್ಚ ನ್ಯಾಯಾಲಯವು ಒಂದು ಪ್ರಮುಖ ತೀರ್ಪನ್ನು ನೀಡಿದೆ. ನ್ಯಾಯಾಲಯವು, ವಿವಾಹವು ಒಂದು ಪವಿತ್ರ ಬಂಧವಾಗಿದೆ. ಈ ಸಂಬಂಧದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಮೂರನೇ ವ್ಯಕ್ತಿಯು ಮಾನಸಿಕ ಅಥವಾ ಭಾವನಾತ್ಮಕ ಹಾನಿಗೆ ಹೊಣೆಗಾರನಾಗಿರುತ್ತಾನೆ. ಅಂತಹ ಸಂದರ್ಭದಲ್ಲಿ, ಸಂತ್ರಸ್ತ ವ್ಯಕ್ತಿ ಭವಿಷ್ಯದ ದೃಷ್ಟಿಯಿಂದ ಪರಿಹಾರಕ್ಕಾಗಿ ದಾವೆ ಹೂಡಬಹುದು.

ಪ್ರಕರಣ ಯಾವುದು ?

ಸಂತ್ರಸ್ತ ಮಹಿಳೆಯು, ಅವರ ವಿವಾಹ 2012 ರಲ್ಲಿ ನಡೆದಿತ್ತು. 2018 ರಲ್ಲಿ ಅವರಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, 2021 ರಲ್ಲಿ ಒಬ್ಬ ಮಹಿಳೆ ಅವರ ಗಂಡನ ವ್ಯವಹಾರಕ್ಕೆ ಸೇರಿಕೊಂಡಳು ಮತ್ತು ಅವರಿಬ್ಬರು ಹತ್ತಿರವಾದರು. ಗಂಡ ಆ ಮಹಿಳೆಯೊಂದಿಗೆ ಕೆಲಸದ ನಿಮಿತ್ತ ಪ್ರಯಾಣಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಸಂಬಂಧವು ವಿಕೋಪಕ್ಕೆ ಹೋಗುತ್ತಿದ್ದ ಕಾರಣ ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು.

ನ್ಯಾಯಾಲಯವು, ಈ ಪ್ರಕರಣವು ಗಂಡನ ವಿರುದ್ಧ ಅಲ್ಲ, ಬದಲಾಗಿ ಅವನ ಪ್ರೇಯಸಿಯ ವಿರುದ್ಧ ಇದೆ ಎಂದು ಸ್ಪಷ್ಟಪಡಿಸಿತು. ಆದ್ದರಿಂದ, ಈ ಪ್ರಕರಣದ ವಿಚಾರಣೆಯು ಕುಟುಂಬ ನ್ಯಾಯಾಲಯದಲ್ಲಿ ನಡೆಯದೆ, ಸಿವಿಲ್ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿತು. ವಿವಾಹವು ಮುರಿಯಲು ಆ ಮಹಿಳೆಯೇ ಕಾರಣಳೇ ಅಥವಾ ಇಲ್ಲವೇ ಎಂಬುದನ್ನು ಮೊಕದ್ದಮೆಯಲ್ಲಿ ನಿರ್ಧರಿಸಲಾಗುತ್ತದೆ. ಸಂತ್ರಸ್ತ ಮಹಿಳೆ ನೀಡಿದ ಬಲವಾದ ಪುರಾವೆಗಳ ಆಧಾರದ ಮೇಲೆ, ಮೊಕದ್ದಮೆಯು ವಿಚಾರಣೆಗೆ ಯೋಗ್ಯವಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ.