ಜಾರ್ಖಂಡ್‌ನಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ; ಇಬ್ಬರು ಸೈನಿಕರ ವೀರಮರಣ, ಒಬ್ಬರಿಗೆ ಗಾಯ – Naxal Security Forces Gun Fight

ರಾಂಚಿ – ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮಾನಾತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 4 ರಂದು ಮುಂಜಾನೆ ಭದ್ರತಾ ಪಡೆಗಳ ಸೇನೆ ಮತ್ತು ನಿಷೇಧ ಹೇರಿದ್ಧ ನಕ್ಸಲ್ ಸಂಘಟನೆ ‘ಥರ್ಡ್ ಕಾನ್ಫರೆನ್ಸ್ ಪ್ರೆಸೆಂಟೇಶನ್ ಕಮಿಟಿ’ (ಟಿ.ಎಸ್‌.ಪಿ.ಸಿ.) (ಸಿಪಿಐ-ಮಾವೋವಾದಿ ಗುಂಪು) ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಇಬ್ಬರು ಸೈನಿಕರು ವೀರ ಮರಣ ಹೊಂದಿದ್ದಾರೆ. ಸಂತನ ಕುಮಾರ ಮತ್ತು ಸುನಿಲ ರಾಮ ಎಂದು ಅವರ ಹೆಸರಿದೆ. ಈ ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.

ಟಿ.ಎಸ್‌.ಪಿ.ಸಿ. ವಲಯ ಕಮಾಂಡರ್ ಶಶಿಕಾಂತ್ ಗಂಜೂ ತಮ್ಮ ಕೇದಲ ಗ್ರಾಮದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಬರುವ ಸಾಧ್ಯತೆಯಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಶಶಿಕಾಂತ್ ಮೇಲೆ 10 ಲಕ್ಷ ರೂಪಾಯಿ ಬಹುಮಾನವಿದೆ. ಈ  ಆಧಾರದ ಮೇಲೆ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರ ತಂಡ ಗ್ರಾಮದ ಬಳಿ ತಲುಪುತ್ತಿದ್ದಂತೆ ನಕ್ಸಲರಿಗೆ ಇದರ ಮಾಹಿತಿ ಸಿಕ್ಕಿದೆ. ಶಶಿಕಾಂತ್ ಗಂಜೂ ಮತ್ತು ಅವರ ನಕ್ಸಲ್ ಸಹಚರರು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಸಹ ಪ್ರತಿದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯ ನಂತರ, ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದಿದ್ದು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.