ಅನೇಕ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದವರನ್ನು ಭಾರತದ ವಿರುದ್ಧ ಪ್ರಚೋದಿಸುವ ಪಿತೂರಿ ನಡೆಯುತ್ತಿದೆ ! : Himanta Biswa Sarma

  • ಚಿಕನ್ ನೆಕ್ ಕಾರಿಡಾರ್‌ ವಿರುದ್ಧ ಪಿತೂರಿ !

  • ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರಿಂದ ಮಾಹಿತಿ

(ಚಿಕನ್ ನೆಕ್ ಕಾರಿಡಾರ್ ಎಂದರೆ ಬಂಗಾಳದಲ್ಲಿರುವ ಸುಮಾರು ೨೨ ಕಿ.ಮೀ ಉದ್ದದ ಅತ್ಯಂತ ಕಿರಿದಾದ ಭೂಪ್ರದೇಶ. ಈಶಾನ್ಯದ ೭ ರಾಜ್ಯಗಳನ್ನು ಭಾರತದ ಇತರ ಭಾಗಗಳಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗ ಇದಾಗಿದೆ.)

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

ಗೌಹಾಟಿ (ಅಸ್ಸಾಂ) – ಅನೇಕ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿರುವ ಭಾರತೀಯ ನಾಗರಿಕರನ್ನು ಪ್ರಚೋದಿಸುವ ಮೂಲಕ ‘ಚಿಕನ್ ನೆಕ್ ಕಾರಿಡಾರ್’ ಅನ್ನು ದುರ್ಬಲಗೊಳಿಸುವ ಉದ್ದೇಶದಿಂದ ಬಾಂಗ್ಲಾದೇಶದ ಕಟ್ಟರವಾದಿಗಳ ಗುಂಪು ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸರಮಾ ಅವರು, ಧುಬ್ರಿ ಜಿಲ್ಲೆಯ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಲ್ಲಿ ಬಾಂಗ್ಲಾದೇಶದ ಕಟ್ಟರವಾದಿಗಳ ಗುಂಪು ಸ್ಥಳೀಯರನ್ನು ಪ್ರಚೋದಿಸಿ, ಬಾಂಗ್ಲಾದೇಶಕ್ಕೆ ನಿಷ್ಠೆ ತೋರಿಸಲು ಪ್ರೇರೇಪಿಸುತ್ತಿದೆ. ಹಾಗೂ ಈ ಜನರು ಬಹಳ ಹಿಂದೆಯೇ ಬಾಂಗ್ಲಾದೇಶದಿಂದ ವಲಸೆ ಬಂದವರು. ಚಿಕನ್ ನೆಕ್ ಮತ್ತು ಅದರ ಸುತ್ತಮುತ್ತ ವಾಸಿಸುವ ಹೆಚ್ಚಿನ ಜನರು ಮೂಲತಃ ಬಾಂಗ್ಲಾದೇಶದವರಾಗಿದ್ದು, ನಂತರ ಭಾರತೀಯ ಪೌರತ್ವ ಪಡೆದಿದ್ದಾರೆ. ಕೆಲವು ಅಂಶಗಳು ಈ ಜನರಿಗೆ ಅವರ ಮೂಲ ಗುರುತನ್ನು ನೆನಪಿಸುತ್ತಿವೆ ಮತ್ತು ಅವರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ. ಇದು ಭವಿಷ್ಯದಲ್ಲಿ ಅತ್ಯಂತ ಗಂಭೀರ ಭದ್ರತಾ ಬೆದರಿಕೆಯಾಗಬಹುದು. ಎರಡೂ ದೇಶಗಳ ನಡುವೆ ಸಂಘರ್ಷ ಉಂಟಾದರೆ ಈ ಜನರ ನಿಷ್ಠೆ ಯಾರ ಕಡೆ ಇರುತ್ತದೆ? ಎಂದು ಅವರು ಪ್ರಶ್ನಿಸಿದರು.

ಕೆಂಪು ವೃತ್ತದಲ್ಲಿ ತೋರಿಸಿರುವ ‘ಚಿಕನ್ ನೆಕ್ ಕಾರಿಡಾರ್’

 

ಸಂಪಾದಕೀಯ ನಿಲುವು

ಇಂತಹ ಜನರ ಮೇಲೆ ಮುಖ್ಯಮಂತ್ರಿ ಸರಮಾ ಕಠಿಣ ಕ್ರಮ ಕೈಗೊಂಡು ದೇಶವನ್ನು ಸುರಕ್ಷಿತವಾಗಿಸಬೇಕು ಎಂದು ದೇಶಪ್ರೇಮಿಗಳು ಬಯಸುತ್ತಾರೆ ಮತ್ತು ಸರಮಾ ಅದನ್ನು ಮಾಡಿಯೇ ತೀರುತ್ತಾರೆ ಇದರಲ್ಲಿ ಸಂಶಯವಿಲ್ಲ !