ಪ್ರಖರ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ ಅವರು ಮಿರಾಜ್‌ನಲ್ಲಿರುವ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ !

ಶ್ರೀ. ಮುತಾಲಿಕ ಅವರಿಗೆ (ಎಡಗಡೆ) ಪ್ರಸಾದ ಕೊಡುತ್ತಿರುವಾಗ ಶ್ರೀ. ಯೋಗೇಶ ಜೋಶಿ

ಮಿರಾಜ್ (ಸಾಂಗ್ಲಿ ಜಿಲ್ಲೆ), ಆಗಸ್ಟ್ ೧೧ (ವಾರ್ತೆ) – ಶ್ರೀರಾಮ ಸೇನೆಯ ಮುಖ್ಯಸ್ಥರೂ ಮತ್ತು ಪ್ರಖರ ಹಿಂದುತ್ವನಿಷ್ಠರಾದ ಶ್ರೀ. ಪ್ರಮೋದ ಮುತಾಲಿಕ ಅವರು ಆಗಸ್ಟ್ ೧೦ ರಂದು ಬ್ರಾಹ್ಮಣಪುರಿಯ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಈ ವೇಳೆ, ಹಿಂದೂ ಜನಜಾಗೃತಿ ಸಮಿತಿಯ ಸಾಂಗ್ಲಿ ಜಿಲ್ಲಾ ಸಂಮನ್ವಯಕ ಶ್ರೀ. ಸಂತೋಷ ದೇಸಾಯಿ ಅವರು ಆಶ್ರಮದ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಶ್ರೀ. ಪ್ರಮೋದ ಮುತಾಲಿಕ ಅವರು ಆಶ್ರಮ ನೋಡಿ ಸಂತಸ ವ್ಯಕ್ತಪಡಿಸಿದರು ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರು ಈ ಹಿಂದೆ ತಂಗಿದ್ದ ಕೋಣೆಗೆ ಭಾವಪೂರ್ಣ ದರ್ಶನ ಮಾಡಿ, ಅಲ್ಲಿ ಕುಳಿತು ನಾಮಜಪ ಮಾಡಿದರು. ಮೇ ೧೮ ರಂದು ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಶ್ರೀ. ಪ್ರಮೋದ ಮುತಾಲಿಕ ಅವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.