ಉದಯಪುರ ಫೈಲ್ಸ್: ದೂರದರ್ಶನದ ಹಿರಿಯ ಸಲಹಾ ಸಂಪಾದಕ ಅಶೋಕ್ ಶ್ರೀವಾಸ್ತವ್‌ಗೆ ಕೊಲೆ ಬೆದರಿಕೆ!

ಗಾಜಿಯಾಬಾದ್ (ಉತ್ತರ ಪ್ರದೇಶ) – ದೂರದರ್ಶನದ ಹಿರಿಯ ಸಲಹಾ ಸಂಪಾದಕ ಅಶೋಕ್ ಶ್ರೀವಾಸ್ತವ್ ಅವರು ‘ಉದಯಪುರ ಫೈಲ್ಸ್: ಕನ್ನಯ್ಯಲಾಲ್ ಟೈಲರ್ ಮರ್ಡರ್’ ಸಿನಿಮಾದ ಬಗ್ಗೆ ‘ಎಕ್ಸ್’ ನಲ್ಲಿ ಮಾಡಿದ ಪೋಸ್ಟ್‌ಗಾಗಿ ಅವರಿಗೆ ಕೊಲೆ ಬೆದರಿಕೆ ಬಂದಿದೆ. ‘ರೋಫಲ್ ಗುಜರಾತಿ’ ಮತ್ತು ‘ಬೇನಾಮಿ’ ಎಂಬ ಎಕ್ಸ್ ಖಾತೆಗಳಿಂದ ತಲೆ ಕತ್ತರಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶ್ರೀವಾಸ್ತವ್ ಅವರ ಹೇಳಿಕೆ ಪ್ರಕಾರ, “ದೇಶದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದಾಗ ಯಾರಿಗೂ ತೊಂದರೆಯಾಗುವುದಿಲ್ಲ; ಆದರೆ ಒಂದು ಸಿನಿಮಾ ನೋಡಲು ಜನರು ಏಕೆ ಹೆದರುತ್ತಿದ್ದಾರೆ? ಸಿನಿಮಾ ಬಿಡುಗಡೆಯಾಗಬೇಕು”, ಎಂದು ಅವರು ಪೋಸ್ಟ್ ಮಾಡಿದ್ದರು.