‘ಇತರೆ ಧರ್ಮಗಳ ಪ್ರಾರ್ಥನಾ ಸ್ಥಳಗಳ ಮೇಲೆ ಬುಲ್ಡೋಜರ್ ಚಲಾಯಿಸಿದ್ದರಿಂದ ಧರಾಲಿ ಗ್ರಾಮಕ್ಕೆ ಸಂಕಷ್ಟ!'(ಅಂತೆ) – Samajwadi Party S T Hasan Controversial Statement

ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಅವರ ಉತ್ತರಾಖಂಡ ಪ್ರವಾಹದ ಕುರಿತ ಹೇಳಿಕೆ

ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವು ಪ್ರವಾಹದ ನೀರಿನೊಂದಿಗೆ ಬಂದ ಮಣ್ಣಿನಿಂದ ಸಂಪೂರ್ಣವಾಗಿ ಮುಚ್ಚಿಹೋಯಿತು. ಇದರಲ್ಲಿ ಹಲವು ಜನರು ಮೃತಪಟ್ಟಿರುವಾಗ, ಇದರ ಕುರಿತು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು, ‘ಇದು ಅತ್ಯಂತ ಹೃದಯವಿದ್ರಾವಕ ಘಟನೆ. ಈ ವಿಪತ್ತುಗಳು ಏಕೆ ಬರುತ್ತವೆ ಎಂಬುದರ ಕಡೆಗೆ ಮೊದಲು ಗಮನ ನೀಡಬೇಕು. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇತರೆ ಧರ್ಮಗಳಿಗೆ (ಹಿಂದೂ ಧರ್ಮ ಹೊರತುಪಡಿಸಿ) ಯಾವುದೇ ಗೌರವ ನೀಡಲಾಗುವುದಿಲ್ಲ. ಯಾವುದೇ ಧಾರ್ಮಿಕ ಸ್ಥಳದ ಮೇಲೆ ಬುಲ್ಡೋಜರ್ ಚಲಾಯಿಸಬಾರದು. ಈ ಜಗತ್ತನ್ನು ನಡೆಸುವವನು ಬೇರೆ ಯಾರೋ ಇದ್ದಾನೆ ಮತ್ತು ಅವನ ನ್ಯಾಯವಾದಾಗ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಹಸನ್ ಅವರ ಮೇಲೆ ಟೀಕೆಗಳು ವ್ಯಕ್ತವಾದಾಗ, ಅವರು ಸ್ಪಷ್ಟನೆ ನೀಡುತ್ತಾ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರಾರ್ಥನಾ ಸ್ಥಳಗಳ ಮೇಲೆ ಬುಲ್ಡೋಜರ್ ಚಲಾಯಿಸಬಾರದು, ಬೇಕಿದ್ದರೆ ಆ ಸ್ಥಳವನ್ನು ಖಾಲಿ ಮಾಡಿಕೊಳ್ಳಬಹುದು. ಇಂತಹ ಸಮಯದಲ್ಲಿ ಮೇಲಿನ ಪರಮಾತ್ಮನ ಕೃಪೆ ಇರುವುದಿಲ್ಲ ಮತ್ತು ವಿಪತ್ತುಗಳು ನಿಲ್ಲುವುದಿಲ್ಲ. ಮೃತಪಟ್ಟವರೊಂದಿಗೆ ನಮ್ಮ ಸಹಾನುಭೂತಿ ಇದೆ; ಆದರೆ ಅಧಿಕಾರದಲ್ಲಿರುವವರು ಅರ್ಥಮಾಡಿಕೊಳ್ಳಬೇಕು, ಅದು ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ ಯಾವುದೇ ಇರಲಿ, ಅವುಗಳಿಗೆ ಅವಮಾನವಾಗಬಾರದು. ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ನಾಲಿಗೆಗೆ ಎಲುಬು ಇಲ್ಲ ಅಂತ ಹೇಗಬೇಕಾದರೂ ಹೊರಳಿಸುವ ಸಮಾಜವಾದಿ ಪಕ್ಷದ ಸಂಸದ! ಮಧ್ಯಪ್ರಾಚ್ಯ ದೇಶಗಳು, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಇತ್ಯಾದಿ ಇಸ್ಲಾಮಿಕ್ ದೇಶಗಳಲ್ಲಿ ಸಂಕಷ್ಟಗಳು ಏಕೆ ಬರುತ್ತಿವೆ? ಈ ದೇಶಗಳಲ್ಲಿ ನಮಾಜ್ ನಡೆಯುತ್ತಿರುವಾಗ ಮುಸ್ಲಿಂ ಭಯೋತ್ಪಾದಕರು ಮಸೀದಿಗಳನ್ನೇ ಏಕೆ ಗುರಿಯಾಗಿಸುತ್ತಾರೆ ಮತ್ತು ಇದರಿಂದ ಅಲ್ಲಿ ಸಂಕಷ್ಟಗಳು ಬರುತ್ತಿವೆ, ಪಾಕಿಸ್ತಾನ ಭಿಕಾರಿಯಾಗಿದೆ ಎಂದು ಹಸನ್ ಏಕೆ ಹೇಳುವುದಿಲ್ಲ?
  • ಅಕ್ರಮ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಿದ್ದರಿಂದ ಸಂಕಷ್ಟಗಳು ಬರುತ್ತವೆ, ಲ್ಯಾಂಡ್ ಜಿಹಾದ್‌ಗಾಗಿ ಅಲ್ಲಲ್ಲಿ ಗೋರಿಗಳನ್ನು ನಿರ್ಮಿಸುವುದರಿಂದ ಸಂಕಷ್ಟಗಳು ಬರುತ್ತವೆ ಎಂದು ಹಸನ್ ಏಕೆ ಹೇಳುವುದಿಲ್ಲ?