ಸನಾತನ ಧರ್ಮವನ್ನು ಅಪಖ್ಯಾತಿಗೊಳಿಸುವ ಷಡ್ಯಂತ್ರ ವಿಫಲಗೊಂಡಿದೆ! – ಯೋಗಋಷಿ ರಾಮದೇವ ಬಾಬಾ – Ramdev Baba Statement

‘ಹಿಂದೂ ಭಯೋತ್ಪಾದನೆ’ ಮತ್ತು ‘ಕೇಸರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ಸನಾತನ ಧರ್ಮವನ್ನು ಅಪಖ್ಯಾತಿಗೊಳಿಸಲು ದೊಡ್ಡ ಪ್ರಯತ್ನ ನಡೆದಿತ್ತು, ಅದು ಕೆಲವರು ಮಾಡುತ್ತಿದ್ದ ದೊಡ್ಡ ರಾಷ್ಟ್ರೀಯ ಪಾಪವಾಗಿತ್ತು. ಆ ಪಾಪವು ಈಗ ನಿವಾರಣೆಯಾಗಿದೆ. “ಸತ್ಯಮೇವ ಜಯತೆ”. ಹಿಂದೂ ಸನಾತನ ಧರ್ಮವನ್ನು ಅಪಖ್ಯಾತಿಗೊಳಿಸಲು ಷಡ್ಯಂತ್ರ ರೂಪಿಸುತ್ತಿದ್ದವರ ಉದ್ದೇಶ ಈಗ ವಿಫಲವಾಗಿದೆ. ಸತ್ಯವು ಈಗ ಇಡೀ ಜಗತ್ತಿನ ಮುಂದೆ ಬಂದಿದೆ.