ಸನಾತನ ಸಂಸ್ಥೆಯ ವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇವರಿಗೆ ಸನ್ಮಾನ!

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ನಡೆದ ಯಾಗದ ಪ್ರಸಾದವನ್ನು ನೀಡುತ್ತಿರುವ ಶ್ರೀ. ಅಭಯ ವರ್ತಕ್

ಮುಂಬಯಿ, ಜುಲೈ ೩ (ವರದಿಗಾರ) – ಸನಾತನ ಸಂಸ್ಥೆಗೆ ೨೫ ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ನೇ ಜನ್ಮದಿನದ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಗೋವಾದಲ್ಲಿ ಇತ್ತೀಚೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆಯೋಜಿಸಲಾದ ಶತಚಂಡಿ ಯಜ್ಞ ಮತ್ತು ಧನ್ವಂತರಿ ಯಾಗದ ಪ್ರಸಾದವನ್ನು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಅಭಯ ವರ್ತಕ್ ಅವರು ಶ್ರೀ. ದೇವೇಂದ್ರ ಫಡ್ನವೀಸ್ ಅವರಿಗೆ ಶ್ರೀ ಬಾಲಾಜಿಯ ಬೆಳ್ಳಿಯ ವಿಗ್ರಹ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಜೀವನಚರಿತ್ರೆಯ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು, ಹಾಗೆಯೇ ನಡೆದ ಮಹೋತ್ಸವದ ಕುರಿತು ಸಂಕ್ಷಿಪ್ತ ಮಾಹಿತಿಯನ್ನೂ ನೀಡಿದರು. ‘ಕಾರ್ಯಬಾಹುಳ್ಯದಿಂದಾಗಿ ಮಹೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂಬ ಭಾವನೆಯನ್ನು ಈ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸನಾತನದ ಸಾಧಕರಾದ ಶ್ರೀಮತಿ ಶಶಿಕಲಾ ಪೈ ಮತ್ತು ಶ್ರೀಮತಿ ಪೂರ್ಣಿಮಾ ಪ್ರಭು ಉಪಸ್ಥಿತರಿದ್ದರು.