ಛತ್ತೀಸ್‌ಗಢ: ಮದ್ಯ ಹಗರಣದಲ್ಲಿ ಕಾಂಗ್ರೆಸ್ ಭವನವನ್ನು ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ !

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢ ರಾಜ್ಯದಲ್ಲಿ ನಡೆದ 2,161 ಕೋಟಿ ರೂಪಾಯಿಗಳ ಮದ್ಯ ಹಗರಣದ ತನಿಖೆಯಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಮಾಜಿ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರ ರಾಯಪುರ ನಿವಾಸ, ಸುಕ್ಮಾದಲ್ಲಿರುವ ಕಾಂಗ್ರೆಸ್ ಭವನ ಮತ್ತು ಅವರ ಪುತ್ರ ಹರೀಶ್ ಕವಾಸಿ ಅವರ ಸುಕ್ಮಾ ನಿವಾಸವನ್ನು ಜಪ್ತಿ ಮಾಡಿದೆ. ಒಟ್ಟು 6 ಕೋಟಿ 15 ಲಕ್ಷ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಹಗರಣವು 2019 ರಿಂದ 2022 ರ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಅಧಿಕಾರಾವಧಿಯಲ್ಲಿ ಸಂಭವಿಸಿತ್ತು. ಕವಾಸಿ ಲಖ್ಮಾ ಮತ್ತು ಅವರ ಪುತ್ರ ಹರೀಶ್ ಈ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ವ್ಯವಹಾರಗಳ ಪುರಾವೆಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು ಇಡಿಯ ಈ ಕ್ರಮವನ್ನು ‘ರಾಜಕೀಯ ಸೇಡಿನ ಕ್ರಮ’ ಎಂದು ಬಣ್ಣಿಸಿದ್ದಾರೆ.

ಸಂಪಾದಕೀಯ ನಿಲುವು

ಇದು ಕಾಂಗ್ರೆಸ್‌ಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಈಗ ದೇಶದಲ್ಲಿ ಭ್ರಷ್ಟಾಚಾರಿ ಕಾಂಗ್ರೆಸ್ ಅನ್ನು ನಿಷೇಧಿಸುವುದು ಮಾತ್ರ ಬಾಕಿ ಉಳಿದಿದೆ!