Vivek Agnihotri The Bengal Files : ಕಾಶ್ಮೀರ ನಮ್ಮನ್ನು ಅಳಿಸಿದರೆ ಬಂಗಾಳ ನಮ್ಮನ್ನು ಕಾಡಲಿದೆ!

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಬಂಗಾಲ ಫೈಲ್ಸ್’  ಚಿತ್ರದ ಟೀಸರ್ ವಾಕ್ಯ 

(ಟೀಸರ್ ಅಂದರೆ ಚಲನಚಿತ್ರದ ಸಂಕ್ಷಿಪ್ತ ಭಾಗ) 

ಮುಂಬಯಿ – ‘ದಿ ಕಾಶ್ಮೀರ್ ಫೈಲ್ಸ್ ‘ ಚಲನಚಿತ್ರ ನಿರ್ಮಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದೀಗ ‘ ದಿ ಬಂಗಾಲ ಫೈಲ್ಸ್: ರೈಟ್ ಟು ಲೈಫ್ ‘ ಎಂಬ ನೂತನ ಚಿತ್ರವನ್ನು ತಯಾರಿಸಿದ್ದಾರೆ. ಈ ಚಲನಚಿತ್ರದ ‘ಟೀಸರ್ ‘ಇತ್ತೀಚಿಗೆ ಬಿಡುಗಡೆಗೊಂಡಿದ್ದು ಅದನ್ನು ನೋಡಿ ಜನರ ಉತ್ಸುಕತೆ ಇನ್ನಷ್ಟು ಹೆಚ್ಚಿದೆ.

1. ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ ಅವರು ಜಂಟಿಯಾಗಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಲನಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಮತ್ತು ದರ್ಶನ ಕುಮಾರ್ ಮುಂತಾದ ಪ್ರಸಿದ್ಧ ನಟರು ಅಭಿನಯಿಸಿದ್ದಾರೆ.

2. ಈ ಟೀಸರ್ ಜೊತೆಗೆ, “ಕಾಶ್ಮೀರ ನಮ್ಮನ್ನು ಅಳಿಸಿದರೆ ಬಂಗಾಳ ನಮ್ಮನ್ನು ಕಾಡಲಿದೆ” ಎಂದು ಬರೆಯಲಾಗಿದೆ,

3. ಒಂದು ನಿಮಿಷ 26 ಸೆಕೆಂಡಿನ ಈ ಟೀಸರ್ ನಲ್ಲಿ, “ನಾನು ಕಾಶ್ಮೀರಿ ಪಂಡಿತ — ಹಾಗಾಗಿ ನಾನು ಇದನ್ನು ದೃಢವಾಗಿ ಹೇಳುತ್ತಿದ್ದೇನೆ, ಬಂಗಾಲ ಇನ್ನೊಂದು ಕಾಶ್ಮೀರವಾಗುತ್ತಿದೆ” ಎಂಬ ಮಾತುಗಳು ಕೇಳಿಬರುತ್ತವೆ.

4. ತೇಜ ನಾರಾಯಣ ಅಗ್ರವಾಲ್ ಮತ್ತು ಐಎಂ ಬುದ್ಧ ಪ್ರಾಡಕ್ಷನ್ ಪ್ರಸ್ತುತಪಡಿಸಿರುವ ಈ ಚಲನಚಿತ್ರವು ವಿವೇಕ ಅಗ್ನಿಹೋತ್ರಿ ಅವರ ‘ಫೈಲ್ಸ್ ಟ್ರೈಯಲಾಜಿ’ ಯ ಒಂದು ಭಾಗವಾಗಿದೆ. ಇದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ‘ ಮತ್ತು ‘ದಿ ತಾಶ್ಕಂದ್ ಫೈಲ್ಸ್ ‘ ಈ ಚಿತ್ರಗಳು ಸೇರಿವೆ.

5. ‘ದಿ ಬಂಗಾಲ ಫೈಲ್ಸ್.’ ರೈಟ್ ಟು ಲೈಫ್ ‘ ಈ ಚಲನಚಿತ್ರ ಸಪ್ಟೆಂಬರ್ 5.2025 ರಂದು ಬಿಡುಗಡೆ ಆಗಲಿದೆ.

ಸಂಪಾದಕೀಯ ನಿಲುವು

ಹಿಂದುಗಳ ಮೇಲಿನ ದೌರ್ಜನ್ಯದ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಂತರ ಈಗ ಬಂಗಾಲದಲ್ಲಿನ ಪರಿಸ್ಥಿತಿಯ ಆಧಾರಿತ ಚಲನಚಿತ್ರ ನಿರ್ಮಿಸಲಾಗುತ್ತಿದೆ. ಹಿಂದೂ ಬಾಹುಳ್ಯ ದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ? ಎಂಬುದು ಗಮನಕ್ಕೆ ಬರುತ್ತದೆ ! ಈ ಪರಿಸ್ಥಿತಿ ಬಗ್ಗೆ ಹಿಂದೂಗಳು ಈಗಲೂ ಕೂಡ ಏನು ಮಾಡದಿದ್ದರೆ ನಾಳೆ ಪ್ರತಿಯೊಂದು ರಾಜ್ಯದ ಕುರಿತು ಇಂತಹ ಒಂದು ಚಿತ್ರ ನಿರ್ಮಿಸಬೇಕಾಗುವುದು !