ಹರಿದ್ವಾರ (ಉತ್ತರಾಖಂಡ) – ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಯೋಗ ಗುರು ರಾಮದೇವ ಬಾಬಾ ಪಾಕಿಸ್ತಾನವನ್ನು ‘ಒಂದು ವಿಫಲ ರಾಷ್ಟ್ರ’ ಎಂದು ಕರೆದಿದ್ದಾರೆ. ಅದು ಶೀಘ್ರದಲ್ಲೇ ಅನೇಕ ತುಂಡುಗಳಾಗಿ ವಿಭಜನೆಯಾಗಲಿದೆ ಮತ್ತು ಭವಿಷ್ಯದಲ್ಲಿ ಕರಾಚಿ ಮತ್ತು ಲಾಹೋರ್ನಲ್ಲಿ ಸನಾತನ ಗುರುಕುಲಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
🚨 “Will have to build next Gurukuls in Karachi & Lahore” — Baba Ramdev
📉 Predicts Pakistan’s collapse citing unrest in Balochistan & PoK
🇮🇳 Envisions Sanatan resurgence beyond borders!#IndianArmy #IndiaPakistanWar #Kashmir
VC: @UpnewsUp pic.twitter.com/l1NsXkuEhT— Sanatan Prabhat (@SanatanPrabhat) May 5, 2025
ರಾಮದೇವ್ ಬಾಬಾ ಮಾತು ಮುಂದುವರೆಸುತ್ತಾ, ಪಾಕಿಸ್ತಾನದ ಪಶ್ತೂನ್ ಮತ್ತು ಬಲೂಚಿಸ್ತಾನದಂತಹ ಪ್ರದೇಶಗಳ ಜನರು ಸ್ವಾತಂತ್ರ್ಯವನ್ನು ಒತ್ತಾಯಿಸುತ್ತಿದ್ದಾರೆ, ಆ ಮೂಲಕ ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಬಹಿರಂಗವಾಗುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪರಿಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ. ಸನಾತನ ಸಂಸ್ಕೃತಿಯ ಬಗ್ಗೆ ಪ್ರಸ್ತಾಪಿಸುವಾಗ, ರಾಮದೇವ್ ಬಾಬಾ ಅವರು ಭಾರತೀಯ ಸಂವಿಧಾನ ಮತ್ತು ಸನಾತನ ಧರ್ಮ ಈ ಎರಡಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಹೇಳಿದರು. ರಾಷ್ಟ್ರೀಯ ಧರ್ಮ ಮತ್ತು ವೈದಿಕ ಧರ್ಮವೇ ಸರ್ವೋಚ್ಚ ಎಂದು ಹೇಳಿದ ಅವರು, ದೇಶವಾಸಿಗಳು ಏಕತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.