Naval Officers Arrested In Odisha : ಅಗ್ನಿವೀರ ಯೋಜನೆಯ ನೇಮಕಾತಿಯಲ್ಲಿ ವಂಚನೆ; 3 ನೌಕಾಪಡೆಯ ಅಧಿಕಾರಿಗಳ ಬಂಧನ

ಬಂಧಿತ ಆರೋಪಿ

ನವದೆಹಲಿ – ಸೇನೆಯ ಅಗ್ನಿವೀರ ಯೋಜನೆ ಮೂಲಕ ನೇಮಕಾತಿ ಮಾಡುವ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದಲ್ಲಿ 3 ನೌಕಾಪಡೆಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಒಬ್ಬ ನಿವೃತ್ತ ಅಧಿಕಾರಿಯೂ ಸೇರಿದ್ದಾರೆ. ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಸಹಾಯ ಮಾಡುವ ಭರವಸೆ ನೀಡಿ ಅವರಿಂದ ಹಣ ವಸೂಲಿ ಮಾಡಿದ ಆರೋಪ ಅವರ ಮೇಲಿದೆ. ಸತ್ಯಂ ಚಹರ್, ವಿನಯ ಕುಮಾರ್ ರೇ ಮತ್ತು ನಿವೃತ್ತ ಅಧಿಕಾರಿ ಭೂಷಣ್ ಬಂಧಿತರು. ಭೂಷಣ್ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಅವರು ಅಭ್ಯರ್ಥಿಗಳಿಂದ 30 ಸಾವಿರದಿಂದ 1 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ.

ಪೊಲೀಸರು ಇನ್ನೂ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸೇನೆಯಲ್ಲಿ ಇಂತಹ ಭ್ರಷ್ಟ ಅಧಿಕಾರಿಗಳಿರುವುದು ಆತಂಕಕಾರಿ!