
ಪಹಲ್ಗಾಮ (ಜಮ್ಮು-ಕಾಶ್ಮೀರ) – ಇಲ್ಲಿನ ದಾಳಿಯಲ್ಲಿ ಭಾಗಿಯಾಗಿದ್ದ 4 ಭಯೋತ್ಪಾದಕರಲ್ಲಿ ಇಬ್ಬರನ್ನು ದಾಳಿಯ ಸಮಯದಲ್ಲಿ ಉಪಸ್ಥಿತರಿದ್ದ ಏಕತಾ ತಿವಾರಿ ಗುರುತಿಸಿದ್ದಾರೆ. ಈ ಇಬ್ಬರೂ ಅವರನ್ನು ಹೇಸರಗತ್ತೆಯ ಮೂಲಕ ಪಹಲ್ಗಾಮ ಕರೆದೊಯ್ದಿದ್ದರು. ಈ ಇಬ್ಬರೂ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಹೇಳಿದ್ದಾರೆ.
ಏಕತಾ ಅವರಿಗೆ ಈ ಇಬ್ಬರ ಕೃತ್ಯಗಳು ಮೊದಲೇ ಅನುಮಾನಾಸ್ಪದವಾಗಿ ಕಂಡಿದ್ದವು; ಹಾಗಾಗಿ ಅವರು ಈ ಇಬ್ಬರ ಚಿತ್ರೀಕರಣ ಮಾಡಿದ್ದರು. ಹೇಸರಗತ್ತೆ ಚಾಲಕರೆಂದು ಹೇಳಿಕೊಂಡ ಭಯೋತ್ಪಾದಕರು ಅವರನ್ನು ಅವರೊಂದಿಗೆ ಕರೆದುಕೊಂಡು ಹೋಗಲು ಬಯಸಿದ್ದರು; ಆದರೆ ತಾವು ಅವರೊಂದಿಗೆ ಹೋಗಲಿಲ್ಲ ಎಂದು ಏಕತಾ ಹೇಳಿದ್ದಾರೆ. ಅವರು ಪದೇ ಪದೇ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಏಕತಾ ಮತ್ತು ಅವರ ಸಹೋದರನಿಗೆ ಅವರ ಧರ್ಮದ ಬಗ್ಗೆ ವಿಚಾರಿಸಿದರು. ಏಕತಾ ಅವರು, ‘ಕುರಾನ್ ಓದುವುದಿಲ್ಲ ಮತ್ತು ನಾನು ರುದ್ರಾಕ್ಷಿ ಮಾಲೆ ಧರಿಸುತ್ತೇನೆ’ ಎಂದು ಹೇಳಿದಾಗ, ಭಯೋತ್ಪಾದಕರು ಏಕತಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಭಯೋತ್ಪಾದಕರು ಅಜ್ಮೀರ್ ಬಗ್ಗೆ ವಿಚಾರಿಸಿದರು. ತಾವು ಎಂದಿಗೂ ಅಜ್ಮೀರ್ಗೆ ಹೋಗಿಲ್ಲ ಎಂದು ಏಕತಾ ಅವರಿಗೆ ತಿಳಿಸಿದರು. ನಂತರ ಅವರು ಅಮರನಾಥ ಯಾತ್ರೆಯ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು. ಅದರಿಂದ ಎಷ್ಟು ಜನರು ಬಂದಿದ್ದರು ಮತ್ತು ಯಾರು ಯಾವ ಧರ್ಮದವರು ಎಂದು ತಿಳಿದುಕೊಳ್ಳಲು ಅವರಿಗೆ ಆಸಕ್ತಿ ಇತ್ತು.