UP Train Derailment Attempt : ಉತ್ತರ ಪ್ರದೇಶದಲ್ಲಿ ರೈಲು ಉರುಳಿಸುವ ಪ್ರಯತ್ನ, ಚಾಲಕನ ಜಾಗರೂಕತೆಯಿಂದ ವಿಫಲ !

ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕರು ವಶಕ್ಕೆ

ಹರದೋಯಿ – ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ರೈಲು ಉರುಳಿಸುವ ಪ್ರಯತ್ನ ಬೆಳಕಿಗೆ ಬಂದಿದೆ. ಹರದೋಯಿ ರೈಲ್ವೆ ನಿಲ್ದಾಣ ಮತ್ತು ಕೌಧಾ ರೈಲ್ವೆ ನಿಲ್ದಾಣದ ನಡುವೆ ಸಮಾಜಘಾತುಕರು ರೈಲ್ವೆ ಹಳಿಯ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಯೋಗ ನಗರಿ ದೂನ್ ಎಕ್ಸ್ಪ್ರೆಸ್ ಅನ್ನು ಉರುಳಿಸಲು ಪ್ರಯತ್ನಿಸಿದರು; ಆದರೆ ಚಾಲಕನ ಎಚ್ಚರಿಕೆಯಿಂದ ದೊಡ್ಡ ದುರಂತ ತಪ್ಪಿದೆ. ರೈಲು ಚಾಲಕ ಹಳಿಗಳ ಮೇಲೆ ದೊಡ್ಡ ಕಲ್ಲುಗಳನ್ನು ನೋಡಿ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದನು. ನಂತರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

1. ಈ ಪ್ರಕರಣದಲ್ಲಿ ರೈಲ್ವೆ ಪೊಲೀಸರು ಘಟನಾ ಸ್ಥಳದಿಂದ ಕನ್ನಾರಿ ಗ್ರಾಮದ 15 ವರ್ಷದ ಮುಸ್ಲಿಂ ಯುವಕ ಮತ್ತು ಸಹೋರಾ ಗ್ರಾಮದ 16 ವರ್ಷದ ಮುಸ್ಲಿಂ ಹುಡುಗನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ.

2. ಆರೋಪಿ ಮಕ್ಕಳು ಅಬ್ದುಲಪುರವಾ ಗ್ರಾಮದ ತಮ್ಮ ಸಂಬಂಧಿ ಸಲ್ಮಾನ್ ಮನೆಗೆ ಬಂದಿರುವುದು ಕಂಡುಬಂದಿದೆ. ಸಲ್ಮಾನ್ ಮನೆಯಿಂದ ಇಬ್ಬರೂ ನಡೆದುಕೊಂಡು ರೈಲ್ವೆ ಹಳಿಗೆ ಬಂದು ಹಳಿಯ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟಿದ್ದಾರೆ. ಅವರು ಕಲ್ಲುಗಳನ್ನು ಏಕೆ ಇಟ್ಟರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಈ ಬಾಲಕರ ಮೊಬೈಲ್ ಫೋನ್‌ನಲ್ಲಿ ಕೆಲವು ಫೋಟೋಗಳು ಸಹ ಸಿಕ್ಕಿವೆ.

ಸಂಪಾದಕೀಯ ನಿಲುವು

ಸಾವಿರಾರು ಜನರ ಜೀವ ತೆಗೆಯುವಷ್ಟು ತಿಳುವಳಿಕೆ ಇರುವವರನ್ನು ‘ಅಪ್ರಾಪ್ತರು’ ಎಂದು ಕರೆಯುವುದು ಹೇಗೆ? ಇವರನ್ನು ಮತ್ತು ಇವರಿಗೆ ಸಹಾಯ ಮಾಡಿದವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು !