|

ಸಿಪಹಿಜಾಲಾ (ತ್ರಿಪುರ) – ಸಿಪಹಿಜಾಲಾ ಜಿಲ್ಲೆಯಲ್ಲಿ ಅಂದಾಜು 20 ರಿಂದ 25 ಬಾಂಗ್ಲಾದೇಶಿ ಕಳ್ಳ ಸಾಗಾಣೆದಾರರು ಭಾರತದ ಗಡಿಯೊಳಗೆ ನುಸುಳುತ್ತಿರುವಾಗ ಗಡಿ ಭದ್ರತಾ ಪಡೆಯ ಗಸ್ತು ತಂಡ ತಡೆದರು. ಆ ವೇಳೆ ಕಳ್ಳಸಾಗಣೆದಾರರು ಸೈನಿಕರ ಮೇಲೆ ದಾಳಿ ನಡೆಸಿದರು. ಇದರಲ್ಲಿ 3 ಯೋಧರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವಾಗ ಕಳ್ಳಸಾಗಣೆದಾರರು ಸೈನಿಕರಿಂದ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೊ, ಆಗ ಓರ್ವ ಸೈನಿಕ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದನು. ಇದರಲ್ಲಿ ಮೊಹಮ್ಮದ್ ಅಲಮಿನ್ ಎಂಬ ಹೆಸರಿನ ಬಾಂಗ್ಲಾದೇಶದ ಕಳ್ಳಸಾಗಣೆದಾರ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವನ ಸಾವಾಗಿದೆ. “ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಡಿನ ದಾಳಿ ನಡೆಸಬೇಕಾಯಿತು” ಎಂದು ಗಡಿ ಭದ್ರತಾ ಪಡೆಯು ತಿಳಿಸಿದೆ. ಈ ಕಳ್ಳಸಾಗಾಣಿಕೆದಾರ ಯಾರು? ಮತ್ತು ಅವರ ಜಾಲ ಎಲ್ಲಿಯವರೆಗೆ ಹರಡಿದೆ?, ಇದರ ತನಿಖೆ ಪೋಲಿಸರು ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಉದ್ದೇಶಪೂರ್ವಕವಾಗಿ ಇಂತಹ ಘಟನೆಗಳನ್ನು ಮಾಡಲಾಗುತ್ತಿದೆಯೇ?, ಇದರ ಅನ್ವೇಷಣೆ ಆಗಬೇಕಾಗಿದೆ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman