ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ ಅವರ ಹೇಳಿಕೆ
ಮುಂಬಯಿ – ಲವ್ ಜಿಹಾದ್ ಘಟನೆಗಳನ್ನು ತಡೆಯಲು ರಾಜ್ಯ ಸರಕಾರವು ಸಮಿತಿಯನ್ನು ನೇಮಿಸಿದೆ; ಆದರೆ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ ಅವರು ಅದನ್ನು ವಿರೋಧಿಸಿದ್ದಾರೆ. ಶಿರಡಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಅವರು, ‘ಲವ್ ಜಿಹಾದ್’ ಕಾನೂನನ್ನು ನಾನು ವಿರೋಧಿಸುತ್ತೇನೆ. ಹಿಂದೂ-ಮುಸ್ಲಿಂ ಹುಡುಗ-ಹುಡುಗಿ ಒಟ್ಟಿಗೆ ಬರುತ್ತಾರೆ ಮತ್ತು ಮದುವೆಯಾಗುತ್ತಾರೆ. ಆದ್ದರಿಂದ ಅದನ್ನು ಲವ್ ಜಿಹಾದ್ ಎಂದು ಕರೆಯುವುದು ತಪ್ಪು. ಲವ್ ಜಿಹಾದ್ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ; ಆದರೆ ಮದುವೆಯ ನಂತರ ಮತಾಂತರ ಆಗಬಾರದು ಎಂದು ಕಾನೂನಿನಲ್ಲಿ ಅವಕಾಶವಿರಬೇಕು. ಹಿಂದೂ ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಅಂತಹವುಗಳಿಗೆ ಕಡಿವಾಣ ಹಾಕಬೇಕು. ಮತಾಂತರ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು,’ ಎಂದು ಹೇಳಿದರು.
ಸಂಪಾದಕೀಯ ನಿಲುವು
|