ಫೆಬ್ರುವರಿ ೧೮ ರಂದು ಶಿಕ್ಷೆ ವಿಧಿಸಲಾಗುವುದು
ನವದೆಹಲಿ – ಇಲ್ಲಿಯ ರಾವುಸ ಅವ್ಹೆನ್ಯೂ ನ್ಯಾಯಾಲಯವು ೧೯೮೪ರ ಸಿಖ್ಖವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಸಂಸದ ಸಜ್ಜನ ಕುಮಾರ ರವರನ್ನು ಅಪರಾಧಿ ಎಂದು ಹೇಳಿದೆ. ಅವರಿಗೆ ಫೆಬ್ರುವರಿ ೧೮ ರಂದು ಶಿಕ್ಷೆ ವಿಧಿಸಲಾಗುವುದು. ಈ ಗಲಭೆಯ ಸಮಯದಲ್ಲಿ ಸರಸ್ವತಿ ವಿಹಾರದಲ್ಲಿ ನಡೆದಿರುವ ೨ ಸಿಖ್ಖರ ಹತ್ಯೆಯ ಆರೋಪವು ಅವರ ಮೇಲಿತ್ತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಈ ಗಲಭೆಯು ಭುಗಿಲೆದ್ದಿತ್ತು.
Congress leader Sajjan Kumar has been convicted in the 1984 anti-Sikh riots case by the Rouse Avenue Court 🏛️
The sentence will be pronounced on Feb 18
Convicting the accused after 41 years is not justice, but gross injustice
कांग्रेस l सज्जन कुमार pic.twitter.com/yaGjWgpuDS
— Sanatan Prabhat (@SanatanPrabhat) February 12, 2025
೧೯೮೪ರ ನವೆಂಬರ್ ೧ ರಂದು ಪಶ್ಚಿಮ ದೆಹಲಿಯಲ್ಲಿನ ರಾಜನಗರ ಪಾರ್ಟ್-೧ ರಲ್ಲಿ ಸರದಾರ ಜಸವಂತ ಸಿಂಹ ಮತ್ತು ಅವರ ಮಗ ತರುಣದೀಪ ಸಿಂಹ ರವರ ಹತ್ಯೆ ಮಾಡಲಾಗಿತ್ತು. ಗಲಭೆಯ ಗುಂಪಿನ ನೇತೃತ್ವವನ್ನು ಸಜ್ಜನ ಕುಮಾರರವರು ವಹಿಸಿದ್ದರು.
ಸಂಪಾದಕೀಯ ನಿಲುವು೪೧ ವರ್ಷಗಳ ನಂತರ ಆರೋಪಿಯನ್ನು ಅಪರಾಧಿಯೆಂದು ನಿಶ್ಚಯಿಸುವುದು ನ್ಯಾಯವಾಗಿರದೇ ಘೋರ ಅನ್ಯಾಯವಾಗಿದೆ ! |