ವ್ಯಾಪಾರ ಉದ್ದೇಶದ ಬಳಕೆದಾರರಿಗೆ ಚಿಲ್ಲರೆ ಪೆಟ್ರೋಲ್ ಬಂಕ್ಗಳಿಂದ ಇಂಧನ ಖರೀದಿಸಲು ನಿಷೇಧ
ಸಾಮಾನ್ಯ ನಾಗರಿಕರ ಸೌಕರ್ಯಕ್ಕಾಗಿ ಕೇಂದ್ರ ಸರಕಾರದ ನಿರ್ಧಾರ

ನವದೆಹಲಿ – ಇರಾನ್-ಅಮೆರಿಕ ಯುದ್ಧದಿಂದಾಗಿ ತೈಲ ಬಿಕ್ಕಟ್ಟು ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಭಾರತದಲ್ಲಿ ಇನ್ನು ಎರಡೂವರೆ ತಿಂಗಳ ಇಂಧನ ಬಾಕಿ ಉಳಿದಿದೆ. ಇದರಿಂದಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದೆ. ಈಗ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಸಿಗುವಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರಕಾರ ಮತ್ತೊಂದು ಪ್ರಮುಖ ಆದೇಶವನ್ನು ಹೊರಡಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಒಂದು ದಿನದಲ್ಲಿ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿಸಬಹುದಾಗಿದೆ. ಈ ಡೀಸೆಲ್ ಅನ್ನು ಮರುಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರಮುಖವಾಗಿ ಕಾರ್ಖಾನೆಗಳು ಮತ್ತು ವ್ಯಾಪಾರ ಉದ್ದೇಶದ ಬಳಕೆದಾರರು ಇನ್ನು ಮುಂದೆ ಚಿಲ್ಲರೆ ಪೆಟ್ರೋಲ್ ಬಂಕ್ಗಳಿಂದ ಇಂಧನ ಖರೀದಿಸಲು ಸಾಧ್ಯವಾಗುವುದಿಲ್ಲ. ಸದ್ಯಕ್ಕೆ ಮುಂದಿನ 90 ದಿನಗಳವರೆಗೆ ಈ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಈ ಆದೇಶವನ್ನು ಜೂನ್ 11 ರಂದು ನೀಡಲಾಗಿದೆ.
ವ್ಯಾಪಾರ ಉದ್ದೇಶದ ಖರೀದಿದಾರರು ಡೀಸೆಲ್ ಖರೀದಿಸಲು ಕೇವಲ ಸಗಟು ಮಾರಾಟ ಕೇಂದ್ರಗಳಿಂದಲೇ ಇಂಧನ ಖರೀದಿಸಬೇಕಾಗುತ್ತದೆ.
ಸರಕಾರ ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಬೇಕಾಯಿತು?
ದೇಶದ ಕೆಲವು ಭಾಗಗಳ ಚಿಲ್ಲರೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಮಾರಾಟದಲ್ಲಿ ಹಠಾತ್ ಮತ್ತು ಅಸಹಜ ಹೆಚ್ಚಳ ಕಂಡುಬಂದಿದ್ದರಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಈ ನಿರ್ಧಾರದಿಂದ ಸಾಮಾನ್ಯ ಗ್ರಾಹಕರಿಗೆ ಇಂಧನದ ಕೊರತೆಯಾಗುವುದಿಲ್ಲ ಎಂದು ಸರಕಾರ ಹೇಳಿದೆ. ಚಿಲ್ಲರೆ ಮತ್ತು ಸಗಟು ದರಗಳ ನಡುವಿನ ದೊಡ್ಡ ವ್ಯತ್ಯಾಸದಿಂದಾಗಿ ಕಾರ್ಖಾನೆಗಳು ಮತ್ತು ವ್ಯಾಪಾರ ಉದ್ದೇಶದ ಗ್ರಾಹಕರು ಸಗಟು ರೂಪದಲ್ಲಿ ಇಂಧನ ಖರೀದಿಸುವುದನ್ನು ನಿಲ್ಲಿಸಿದ್ದಾರೆ ಎಂಬುದು ಸರಕಾರದ ತನಿಖೆಯಿಂದ ತಿಳಿದುಬಂದಿದೆ. ಅದಕ್ಕೆ ಬದಲಾಗಿ ಅವರು ಇಂಧನ ಖರೀದಿಸಲು ತಮ್ಮ ವಾಹನಗಳನ್ನು ನೇರವಾಗಿ ಚಿಲ್ಲರೆ ಪೆಟ್ರೋಲ್ ಬಂಕ್ಗಳಿಗೆ ಕಳುಹಿಸಲು ಪ್ರಾರಂಭಿಸಿದರು. ಇದರಿಂದಾಗಿ ಸಾಮಾನ್ಯ ಜನರಿಗೆ ಇಂಧನ ಕೊರತೆಯಾಗುವ ಅಪಾಯ ಎದುರಾಯಿತು.
Ministry of Petroleum & Natural Gas: This Control Order restricting daily sales of retail HSD (High Speed Diesel) to 200 litres is to prevent bulk purchase of HSD from Retail Outlets for diversion and resale to commercial and industrial customers causing supply issues. This… pic.twitter.com/cwIrA3sRjc
— ANI (@ANI) June 12, 2026
ದೆಹಲಿಯ ಉದಾಹರಣೆಯನ್ನು ತೆಗೆದುಕೊಂಡರೆ, ಚಿಲ್ಲರೆ ಬಂಕ್ಗಳಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 95.20 ರೂಪಾಯಿ ಆಗಿದೆ, ಆದರೆ ಸಗಟು ರೂಪದಲ್ಲಿ ಡೀಸೆಲ್ ಖರೀದಿಸುವ ಕೈಗಾರಿಕೆಗಳು ಪ್ರತಿ ಲೀಟರ್ಗೆ 134.50 ರೂಪಾಯಿ ಪಾವತಿಸಬೇಕಾಗುತ್ತಿದೆ. ಇದರಲ್ಲಿ ಪ್ರತಿ ಲೀಟರ್ಗೆ ಸುಮಾರು 39.30 ರೂಪಾಯಿಗಳ ನೇರ ವ್ಯತ್ಯಾಸವಿದೆ. ಸಾಮಾನ್ಯ ಜನರನ್ನು ಹಣದುಬ್ಬರದಿಂದ ರಕ್ಷಿಸಲು ಸರಕಾರಿ ತೈಲ ಕಂಪನಿಗಳು ಚಿಲ್ಲರೆ ಬಂಕ್ಗಳಲ್ಲಿನ ದರಗಳಲ್ಲಿ ಭಾರಿ ಹೆಚ್ಚಳ ಮಾಡಿಲ್ಲ. ಆದಾಗ್ಯೂ ದೊಡ್ಡ ಕಾರ್ಖಾನೆಗಳು ಮತ್ತು ಸಾರಿಗೆ ಸಂಸ್ಥೆಗಳಂತಹ ಸಗಟು ಗ್ರಾಹಕರಿಗೆ ದರಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಜೋಡಿಸಿ ಇಡಲಾಗಿದೆ, ಇದರಿಂದಾಗಿ ಸಗಟು ದರಗಳಲ್ಲಿ ಭಾರಿ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ