10 ಕೋಟಿಯ ಪಾನ್ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ ನಟ ಅನಿಲ್ ಕಪೂರ್ !

ಮುಂಬಯಿ – ಹಿಂದಿ ಚಿತ್ರರಂಗದ ನಟ ಅನಿಲ ಕಪೂರ್ ಇವರು ಪಾನ ಮಸಾಲದ ಜಾಹೀರಾತು ಮಾಡಲು ನಿರಾಕರಿಸಿದ್ದಾರೆ. ಜಾಹಿರಾತಿಗಾಗಿ ಅವರಿಗೆ ೧೦ ಕೋಟಿ ರೂಪಾಯಿ ನೀಡುವವರಿದ್ದರು; ಆದರೆ ಅವರು ಇದನ್ನು ನಿರಾಕರಿಸಿದ್ದಾರೆ. ‘ಮುಂಬರುವ ಪೀಳಿಗೆಯಲ್ಲಿ ಯಾವುದೇ ತಪ್ಪಾದ ಸಂದೇಶ ಹೋಗುವುದು ಅಥವಾ ನನ್ನನ್ನು ಪ್ರೀತಿಸುವವರ ಆರೋಗ್ಯಕ್ಕೆ ಹಾನಿ ಆಗುವುದು, ಈ ರೀತಿಯ ಯಾವುದೇ ಜಾಹೀರಾತು ಮಾಡುವುದಿಲ್ಲ,’ ಎಂದು ಅವರು ಹೇಳಿದರು. ಈ ನಿರ್ಣಯ ಕೈಗೊಂಡಿರುವಕ್ಕಾಗಿ ಅನೇಕರು ಅನಿಲ್ ಕಪೂರ್ ಇವರನ್ನು ಶ್ಲಾಘಿಸಿದ್ದಾರೆ.
ಈ ಹಿಂದೆ ಹಿರಿಯ ನಟ ಅಮಿತಾ ಬಚ್ಚನ್, ನಟ ಶಾರುಖ್ ಖಾನ್, ಅಕ್ಷಯ ಕುಮಾರ್, ಅಜಯ್ ದೇವಗನ್ ಇವರು ಗುಟುಕಾ ಹಾಗೂ ಪಾನ ಮಸಾಲದ ಜಾಹೀರಾತು ಮಾಡಿದ ನಂತರ ಅವರ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಟಿಪ್ಪಣಿಗಳು ಮಾಡಲಾಗಿದ್ದವು.

ಸಂಪಾದಕೀಯ ನಿಲುವು

ಪ್ರಸಿದ್ಧಿಗಾಗಿ ಮತ್ತು ಹಣದ ಲೋಭ ಇದಕ್ಕಿಂತಲೂ ಸಾಮಾಜಿಕ ಅರಿವು ಜೋಪಾನ ಮಾಡುವ ಇಂತಹ ನಟರು ಬೇಕು !