ಗಾಜಿಪುರದಲ್ಲಿ (ಉತ್ತರ ಪ್ರದೇಶ) ರೈಲ್ವೆ ಹಳಿ ಮೇಲೆ ಕಟ್ಟಿಗೆ ರಾಶಿ; ಇಂಜಿನ್‌ನೊಳಗೆ ನುಗ್ಗಿತು !

3 ಜನರ ಬಂಧನ

ಗಾಜಿಪುರ (ಉತ್ತರ ಪ್ರದೇಶ) – ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರಾತ್ರಿ ಗಾಜಿಪುರ ಘಾಟ್ ನಿಲ್ದಾಣದಿಂದ ಗಾಜಿಪುರಕ್ಕೆ ಬರುತ್ತಿದ್ದಾಗ ರಾತ್ರಿ 2.40 ರ ವೇಳೆಗೆ ರೈಲು ಹಳಿಯ ಮಧ್ಯದಲ್ಲಿ ಮರದ ತುಂಡು ನಿಲ್ಲಿಸಿರುವುದನ್ನು ನೋಡಿದ ಚಾಲಕನು ತುರ್ತು ಬ್ರೇಕ್ ಹಾಕಿದ್ದಾನೆ. ಇದಾದ ನಂತರವೂ ಇಂಜಿನ್‌ನಲ್ಲಿ ಮರದ ತುಂಡು ಸಿಲುಕಿಕೊಂಡಿತು. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ದಾನಿಶ್ ಅನ್ಸಾರಿ, ಸೋನು ಕುಮಾರ್ ಮತ್ತು ಆಕಾಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರೂ ರಾತ್ರಿ ರೈಲು ಹಳಿ ಮೇಲೆ ಗಾಂಜಾ ಸೇದುತ್ತಿದ್ದರು. ಕುಡಿತದ ಅಮಲಿನಲ್ಲಿ ಮೋಜಿಗಾಗಿ ಮರದ ತುಂಡು ಇಟ್ಟಿರುವುದಾಗಿ ಆರೋಪಿಗಳು ಹೇಳಿದ್ದರು.

ಸಂಪಾದಕೀಯ ನಿಲುವು

ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು !