ನಮ್ಮ ಜನಸಂಖ್ಯೆ 25 ಕೋಟಿಯಾಗಿದ್ದೂ 5 ಕೋಟಿ ಜನರು ಬಲಿದಾನದಿಂದ ಸಂವಿಧಾನವನ್ನು ಉರುಳಿಸುವರು !

ಮುಸ್ಲಿಂ ಮುಖಂಡರೊಬ್ಬರ ದೇಶದ್ರೋಹದ ಹೇಳಿಕೆಯ ವಿಡಿಯೋ ವೈರಲ್

ನವ ದೆಹಲಿ – ಕಿವಿ ತೆರೆದು ಆಲಿಸಿ, ನಿಮ್ಮ ಕಿವಿಯಲ್ಲಿ ಕೊಳಕು ಇದ್ದರೆ, ಅದನ್ನು ತೆಗೆದು ಆಲಿಸಿ. ಈಗ ನಾವು 5 ಲಕ್ಷ ಅಲ್ಲ, 25 ಕೋಟಿ ಜನರಿದ್ದೇವೆ, ಅದರಲ್ಲಿ 5 ಕೋಟಿ ಜನರು ಬಲಿದಾನ ಮಾಡುತ್ತಾರೆ ಮತ್ತು ಅಷ್ಟೇ ಸಂಖ್ಯೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬುಡಮೇಲು ಮಾಡಿ ಹೊಸ ಇತಿಹಾಸ ಬರೆಯುತ್ತಾರೆ ಎಂದು ಮುಸ್ಲಿಂ ಮುಖಂಡರೊಬ್ಬರು ಪ್ರಚೋದನಕಾರಿ ಹಾಗೂ ದೇಶದ್ರೋಹಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಾಯಕನ ಹೆಸರು ತಿಳಿದಿಲ್ಲ. ಈ ಹೇಳಿಕೆಗೆ ಸಮಾಜದ ವಿವಿಧ ಸ್ತರಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಭಾಜಪ ವಕ್ತಾರರು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಭಾಜಪ ಸರಕಾರ ಸಂವಿಧಾನ ಬದಲಾಯಿಸುತ್ತಿದೆ’ ಎಂದು ಕೂಗುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳು ಈಗ ಎಲ್ಲಿವೆ ? ಈ ಬಗ್ಗೆ ಅವರೇಕೆ ಬಾಯಿ ತೆರೆಯುತ್ತಿಲ್ಲ ?