ಉತ್ತರ ಪ್ರದೇಶದಲ್ಲಿ ಮತಾಂಧನು ತಾನು ಹಿಂದೂ ಎಂದು ಸುಳ್ಳು ಹೇಳಿ 16 ವರ್ಷದ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ !

ವಿವಾಹಕ್ಕೆ ಆಮಿಷವೊಡ್ಡಿದ

ಜೌನಪುರ (ಉತ್ತರ ಪ್ರದೇಶ) – ಜಿಲ್ಲೆಯ ಸರಪತಾಹಾದಲ್ಲಿ ವಾಸಿಸುತ್ತಿರುವ 16 ವರ್ಷದ ಹಿಂದೂ ಹುಡುಗಿ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ. ಈ ಹುಡುಗಿ ಹಿಮಾಚಲ ಪ್ರದೇಶದ ಸಿರಮೌರನಲ್ಲಿ ಕೆಲಸಕ್ಕೆ ಇದ್ದಳು. ಅಲ್ಲಿ ಆಕೆಗೆ ‘ಅಮನ್’ ಹೆಸರಿನ ಯುವಕನ ಪರಿಚಯವಾಯಿತು. ಅಮನ ತಾನು ಹಿಂದೂ ಎಂದು ಸುಳ್ಳು ಹೇಳಿ ಇತರ ಹಿಂದೂಗಳಂತೆ ಮುಂಗೈಗೆ ದಾರವನ್ನು ಕಟ್ಟಿದ್ದನು. ಅವನು ಅವಳಿಗೆ ವಿವಾಹದ ಆಮಿಶವೊಡ್ಡಿ ಅವಳನ್ನು ಬರೆಲಿಗೆ ಕರೆತಂದು ಅವಳನ್ನು 10 ದಿನಗಳ ಕಾಲ ತನ್ನ ಮನೆಯಲ್ಲಿ ಇಟ್ಟುಕೊಂಡು, ಅವಳ ಮೇಲೆ ಲೈಂಗಿಕವಾಗಿ ಬಲಾತ್ಕಾರ ಮಾಡಿದನು. ಅಮನ್ ನ ಮನೆಗೆ ಹೋದಬಳಿಕ ಆ ಹುಡುಗಿಗೆ ಅವನು ಮುಸಲ್ಮಾನ ಆಗಿದ್ದಾನೆಂದು ತಿಳಿಯಿತು. ಅಮನ್ ನ ವಶದಿಂದ ಅವಳು ತಪ್ಪಿಸಿಕೊಂಡು ಓರ್ವ ದಾರಿಹೋಕನ ಸಹಾಯದಿಂದ ಪೊಲೀಸ ಠಾಣೆ ತಲುಪಿದಳು ಮತ್ತು ಅಮನ್ ನ ವಿರುದ್ಧ ದೂರು ದಾಖಲಿಸಿದಳು.

1. ಆ ಹುಡುಗಿಯು, ‘ನಾನು ಅಪ್ರಾಪ್ತ ವಯಸ್ಕಳಾಗಿರುವುದರಿಂದ ನನಗೆ ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಿಲ್ಲ’, ಎಂದು ಅಮನ್‌ಗೆ ಹೇಳಿದೆನು. ಅವನು ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು. ನಾನು ಅವನಿಗೆ, ನನ್ನ ಮನೆಯವರು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆನು; ಆದರೆ ಅವನು ನನ್ನನ್ನು ಮೋಸದಿಂದ ಬರೇಲಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋದನು. ಎಂದು ಹೇಳಿದಳು.

2. ಈ ಹುಡುಗಿಯು, ದೂರಿನಲ್ಲಿ ಜುಲೈ 13 ರಂದು ಅಮನ್ ಬರೇಲಿಯ ತನ್ನ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಅವನು ನನ್ನ ಲೈಂಗಿಕ ಕಿರುಕುಳ ನೀಡಿದನು. ಅವನ ಗ್ರಾಮಕ್ಕೆ ಹೋದಬಳಿಕ ನನಗೆ ಅವನ ಸತ್ಯಾಂಶ ತಿಳಿಯಿತು. ಅವನು ತನ್ನ ಗುರುತನ್ನು ಮರೆಮಾಚಿ ಸ್ನೇಹವನ್ನು ಮಾಡಿರುವುದು ನನಗೆ ತಿಳಿಯಿತು.

3. ನನಗೆ ಅಮನ್‌ನ ಸತ್ಯ ತಿಳಿದಾಗ ಅವನ ತಂದೆ ನನಗೆ ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದರು.