Bus Driver Attacked with Knife: ಪಡುಬಿದ್ರೆಯ ಇಸ್ಮಾಯಿಲ್ ಅತಿಕನಿಂದ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ !

ಬಸ್ ಓವರ್ ಟೇಕ್ ಮಾಡಿದ ಪ್ರಕರಣ

ಉಡುಪಿ – ಇಲ್ಲಿಯ ಓರ್ವ ಬಸ್ ಚಾಲಕನು ಇಸ್ಮಾಯಿಲ್ ಅತಿಕ್ ಎಂಬ ವ್ಯಕ್ತಿಯ ವಾಹನವನ್ನು ತಪ್ಪಾದ ರೀತಿಯಲ್ಲಿ ‘ಓವರ್ ಟೇಕ್’ ಮಾಡಿರುವ ದಾವೆ ಮಾಡಿದ್ದಾನೆ. ಇದರಿಂದ ಸಿಟ್ಟಾದ ಅತಿಕನು ಬಸ್ಸನ್ನು ಹಿಂಬಾಲಿಸಿ ಪಡುಬಿದ್ರೆಯಲ್ಲಿ ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. (ಇಂತಹವರ ಬಳಿ ಚಾಕು ಎಲ್ಲಿಂದ ಬಂತು ? ಇದನ್ನು ಪೊಲೀಸರು ವಿಚಾರಣೆ ನಡೆಸುವರೆ ? – ಸಂಪಾದಕರು) ಶೈಲೇಂದ್ರ ಅಲಿಯಾಸ್ ಶೈಲೂ ಎಂದು ಬಸ್ ಚಾಲಕನ ಹೆಸರು ಇರುವುದಾಗಿ ತಿಳಿದು ಬಂದಿದೆ. ಈ ಘಟನೆ ಎಪ್ರಿಲ್ ೨೯ ರಂದು ಬೆಳಿಗ್ಗೆ ನಡೆದಿದೆ. ಈ ಘಟನೆಯ ಸಂದರ್ಭದಲ್ಲಿ ಪಡುಬಿದ್ರೆ ಪೊಲೀಸ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಅತಿಕನು, ಬಸ್ ಚಾಲಕ ಮತ್ತು ಕಂಡಕ್ಟರ್ ಇವರು ಅವನ ಮೇಲೆ ಸ್ಕ್ರೂ ಡ್ರೈವರ್ ಇಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.