ಮತದಾನಕ್ಕಾಗಿ ಬಸ್ಸಿನಲ್ಲಿ ಹೊರಟ ಹಿಂದೂ ಯುವತಿಗೆ ಮತಾಂಧ ಮುಸಲ್ಮಾನನಿಂದ ಕಿರುಕುಳ !

ಮಂಗಳೂರು – ಮತ ಚಲಾಯಿಸಲು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದ ಹಿಂದೂ ಯುವತಿಗೆ ಮೊಹಮ್ಮದ್ ಅಝೀಂ ಎಂಬ ಯುವಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಝೀಂ ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದರಿಂದ ಯುವತಿ ರಕ್ಷಣೆಗಾಗಿ ಬಸ್ ಚಾಲಕನ ಸಹಾಯ ಕೇಳಿದ್ದಾಳೆ. ಆ ವೇಳೆ ಬಸ್ ಚಾಲಕ ಸಹಕರಿಸದ ಕಾರಣ ಯುವತಿ ಯುವಕನ ಆಧಾರ್ ಕಾರ್ಡ್ ಕಿತ್ತುಕೊಂಡಿದ್ದಾಳೆ. ಬಸ್ಸಿನ ವೇಗ ಕಡಿಮೆಯಾಗುತ್ತಿದ್ದಂತೆ ಅಝೀಂ ಕಿಟಕಿಯಿಂದ ಹಾರಿ ಪರಾರಿಯಾದನು. ಆಧಾರ್ ಕಾರ್ಡ್ ನೋಂದಣಿ ಪ್ರಕಾರ, ಅಝೀಂ ಲಾಯಿಲ ಗ್ರಾಮದ ಆದರ್ಶ ನಗರದ ನಿವಾಸಿ ಇದ್ದಾನೆ. ಯುವತಿ ಕೊಟ್ಟ ದೂರಿನ ಅನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿರುವ ಕುರಿತು ವರದಿಯಾಗಿದೆ.

ಸಂಪಾದಕೀಯ ನಿಲುವು

ಅಂತಹವರ ಹೆಡೆಮುರಿ ಕಟ್ಟಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !