ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ

ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಮತ್ತು ಅವರ ಸಹವರ್ತಿಗಳಿಗೆ ಧ್ಯಾನ ಮಂದಿರದ ಬಗ್ಗೆ ಮಾಹಿತಿ ಹೇಳುತ್ತಿರುವಾಗ ಸೌ. ಪ್ರಾಜಕ್ತಾ ಪೂಜಾರ

ರಾಮನಾಥಿ (ಗೋವಾ) – ಕೇರಳದ ಕಣ್ಣೂರಿನಲ್ಲಿನ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ‘ಋಷಿದೇವ ಫೌಂಡೇಶನ’ನ ಕಾರ್ಯದರ್ಶಿ ಶ್ರೀ. ಬಾಬು ಕೇಸವನ, ಜಂಟಿ ಕಾರ್ಯದರ್ಶಿ ಮತ್ತು ಸಮನ್ವಯ ನ್ಯಾಯವಾದಿ ರಾಜೇಶ ಪಿ.ಕೆ. ಹಾಗೂ ಸಿಬ್ಬಂದಿ ಶಾಮಲ ಸಿ.ಪಿ. ಉಪಸ್ಥಿತರಿದ್ದರು. ಸನಾತನದ ಸಾಧಿಕಾ ಸೌ. ಪ್ರಾಜಕ್ತಾ ಪೂಜಾರ ಅವರು ಅವರಿಗೆ ಆಶ್ರಮದಲ್ಲಿ ನಡೆಯುವ ರಾಷ್ಟ್ರ ಮತ್ತು ಹಿಂದೂ ಧರ್ಮ ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ವಿಷಯದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.