JeM Terrorist Provokes to Attack India: ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕನಿಂದ ಭಾರತದ ವಿರುದ್ಧ ಹೋರಾಡಲು ಪ್ರಚೋದನೆ !

ಪಾಕಿಸ್ತಾನದಲ್ಲಿ ನುಸುಳಿ ಇಂತಹವರನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತಂದು ಗಲ್ಲುಶಿಕ್ಷೆ ನೀಡುವಂತೆ ಭಾರತವು ಪ್ರಯತ್ನಿಸುವುದು ಅವಶ್ಯಕವಾಗಿದೆ !

ನವದೆಹಲಿ – ಜೈಶ್-ಎ-ಮೊಹಮ್ಮದ್ ಸಂಬಂಧಿತ ಜಿಹಾದಿ ಭಯೋತ್ಪಾದಕ ಫರಹತುಲ್ಲಾ ಘೋರಿಯು ಭಾರತದ ವಿರುದ್ಧ ಯುದ್ಧ ಮಾಡುವಂತೆ ಪ್ರಚೋದಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾನೆ. ಘೋರಿಯು ಅಕ್ಷರಧಾಮ ದೇವಾಲಯದ ಮೇಲೆ ೨೦೦೨ ರಲ್ಲಿ ನಡೆದ ಜಿಹಾದಿ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರನಾಗಿದ್ದು, ಸಧ್ಯ ಪಾಕಿಸ್ತಾನದ ಲಾಹೋರ್‌ನಲ್ಲಿ ಅಡಗಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಫರಹತುಲ್ಲಾ ಘೋರಿ ಮೂಲತಃ ಭಾಗ್ಯನಗರ ನಿವಾಸಿಯಾಗಿದ್ದೂ, ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಹೊಸ ಜನರನ್ನು ನೇಮಿಸಿಕೊಳ್ಳುವಲ್ಲಿ ಸಕ್ರಿಯನಾಗಿದ್ದ. ಭಾರತದ ಗೃಹ ಸಚಿವಾಲಯವು ೨೦೨೦ ರಲ್ಲಿ ಅವನನ್ನು ಭಯೋತ್ಪಾದಕನೆಂದು ಘೋಷಿಸಿತ್ತು.