ಸರಕಾರವು ಜ್ಞಾನವಾಪಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು ! – ನ್ಯಾಯವಾದಿ ಪೂ. ಹರಿ ಶಂಕರ್ ಜೈನ್

ಅಯೋಧ್ಯೆ (ಉತ್ತರ ಪ್ರದೇಶ) – ಜ್ಞಾನವಾಪಿ ಪ್ರಕರಣದ ಕುರಿತು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿಯ ಕುರಿತು, ಈ ಪ್ರಕರಣದ ವಕೀಲ ಪೂ. ಹರಿ ಶಂಕರ್ ಜೈನ್ ಇವರು, ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಒಂದು ದೇವಸ್ಥಾನವಿತ್ತು ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

 

ಭಾರತ ಸರಕಾರವು ಈ ವಿಷಯದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಈ ಸ್ಥಳವನ್ನು ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಬೇಕು. ಅಲ್ಲದೆ, ಇಡೀ ಪ್ರದೇಶವನ್ನು ಹಿಂದೂಗಳ ಕೈಗೆ ಒಪ್ಪಿಸುವ ಕಾನೂನು ಜಾರಿಯಾಗಬೇಕು. ಅಯೋಧ್ಯೆಯಲ್ಲಿರುವಂತೆ ಇಲ್ಲಿಯೂ ಮಂದಿರ ನಿರ್ಮಿಸಬೇಕು ಇದರಿಂದ ಪೂಜೆ ಪ್ರಾರಂಭವಾಗುವುದು ಎಂದು ಹೇಳಿದರು.