‘ಶ್ರೀರಾಮ ನನ್ನ ಕನಸಿನಲ್ಲಿ ಬಂದು, ಜನವರಿ ೨೨ ಕ್ಕೆ ಅಯೋಧ್ಯೆಗೆ ಬರುವುದಿಲ್ಲ ಎಂದು ಹೇಳಿದ ! (ಅಂತೆ) – ತೇಜ ಪ್ರತಾಪ ಯಾದವ

ಬಿಹಾರದ ಪರಿಸರ ಸಚಿವ ತೇಜ ಪ್ರತಾಪ ಯಾದವ ಇವರ ಹಾಸ್ಯಸ್ಪದ ಹೇಳಿಕೆ !

ಪಾಟಲಿಪುತ್ರ (ಬಿಹಾರ) – ಶ್ರೀ ರಾಮನು ನನ್ನ ಕನಸಿನಲ್ಲಿ ಬಂದು, ಬರುವ ಜನವರಿ ೨೨ ರಂದು ಪ್ರಾಣ ಪ್ರತಿಷ್ಠಾಪನೆಯ ದಿನ ಅಯೋಧ್ಯೆಗೆ ಬರುವುದಿಲ್ಲ ಎಂದು ಹೇಳಿದನು, ಶ್ರೀರಾಮ ನನಗೆ, ಈಗ ಅಯೋಧ್ಯೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಅದು ಡೋಂಗಿತನವಾಗಿದೆ. ಆದ್ದರಿಂದ ನಾನು ಆ ದಿನ ಅಲ್ಲಿ ಬರುವುದಿಲ್ಲ’, ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ ಇವರ ಪುತ್ರ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಇವರ ಸಚಿವ ಸಂಪುಟದಲ್ಲಿನ ಪರಿಸರ ಸಚಿವ ತೇಜ ಪ್ರತಾಪ್ ಯಾದವ ಇವರು ಈ ರೀತಿ ಹೇಳಿಕೆ ನೀಡಿದರು. ‘ಚುನಾವಣೆ ಬರುತ್ತಲೆ ಮಂದಿರದ ವಿಷಯ ಬರುತ್ತದೆ. ಚುನಾವಣೆ ಆದ ನಂತರ ಮಂದಿರದ ಕುರಿತು ಯಾರು ಯೋಚನೆ ಮಾಡುವುದಿಲ್ಲ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ’, ಹೀಗೂ ಕೂಡ ಅವರು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಹೇಳಿಕೆ ಕೇವಲ ಜನಪ್ರಿಯತೆಗಾಗಿ ಮತ್ತು ವಿರೋಧಿಸಲು ನೀಡಲಾಗುತ್ತದೆ. ನಾಳೆ, ತೇಜ ಪ್ರತಾಪ ಏನು ಮಾತನಾಡುತ್ತಿದ್ದರು ಅದು ಸುಳ್ಳಾಗಿದೆ, ಹೀಗೆ ನನಗೆ ಸ್ವಪ್ನದೃಷ್ಟಾಂತವಾಗಿದೆ ಎಂದು ಹೇಳಬಹುದು, ಇದರ ಬಗ್ಗೆ ತೇಜ ಪ್ರತಾಪ ಏನು ಹೇಳುವರು ?