ಕಾಂಗ್ರೆಸ್ಸಿನ ಮುಖಂಡರು ಶ್ರೀರಾಮ ಭಕ್ತರಿಗೆ ಬೈಗುಳ ಬಯ್ಯುತ್ತಾ ಓಡಿಸಿದರು !

  • ಕಾಂಗ್ರೆಸ್ಸಿನ ಪರಾಕಾಷ್ಟೆಯ ಹಿಂದೂ ದ್ವೇಷ ತಿಳಿಯಿರಿ !

  • ಶ್ರೀರಾಮ ಭಕ್ತರು ಅಕ್ಷತೆಯ ವಿತರಣೆ ಮಾಡುತ್ತದ್ದರು !

ಜೈಪುರ (ರಾಜಸ್ಥಾನ) – ‘ಕೃಷ್ಣ ಕುಂಜ ವಿಳಾಸ ವೆಲ್ಫೇರ್ ಸೊಸೈಟಿ’ಯ ಅಧ್ಯಕ್ಷ ಹಾಗೂ ಕಾಂಗ್ರೆಸ್ಸಿನ ನಾಯಕ ಜಗದೀಶ ಚೌದರಿ ಇವರು ಇಲ್ಲಿ ಶ್ರೀರಾಮ ಮಂದಿರದ ಅಕ್ಷತೆ ಮನೆಮನೆಗೆ ತಲುಪಿಸುವ ರಾಮ ಭಕ್ತರಿಗೆ ಅವಮಾನ ಮಾಡಿ ಓಡಿಸಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನವರಿ ೨೨, ೨೦೨೪ ರಂದು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದು. ಇದರ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು ಅಲ್ಲಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅದಕ್ಕಾಗಿ ಜನವರಿ ೧ ರಿಂದ ಪೂಜೆ ಮಾಡಿರುವ ಅಕ್ಷತೆಯ ವಿತರಣೆ ಮಾಡುವ ಸೇವೆ ಆರಂಭವಾಗಿದೆ. ಈ ಸೇವೆ ಜನೆವರಿ ೧೫ ರ ವರೆಗೆ ನಡೆಯುವುದು. ಶ್ರೀರಾಮ ಭಕ್ತರಲ್ಲಿನ ಈ ಉತ್ಸಾಹ ಕೆಲವು ಜನರಿಗೆ ಸಹಿಸಲಾಗುತ್ತಿಲ್ಲ ಮತ್ತು ಆದ್ದರಿಂದ ರಾಮ ಭಕ್ತರ ಅವಮಾನದ ಘಟನೆಗಳು ನಡೆಯುತ್ತಿವೆ. ರಾಜಸ್ಥಾನದಲ್ಲಿ ಶ್ರೀ ರಾಮ ಭಕ್ತರ ಜೊತೆಗೆ ದುರ್ನಡತೆ ಮಾಡಲಾಗಿದೆ. ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ಕೂಡ ಮತಾಂಧ ಮುಸಲ್ಮಾನರ ಗುಂಪಿನಿಂದ ಶ್ರೀರಾಮ ಭಕ್ತರ ಮೇಲೆ ಕತ್ತಿಯಿಂದ ದಾಳಿ ಮತ್ತು ಕಲ್ಲು ತೂರಾಟ ಮಾಡಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿತ್ತು.