ರಾಜ್ಯ ಸರಕಾರದಿಂದ ಜನವರಿ ೨೨ ರಂದು ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ !

ಬೆಂಗಳೂರು – ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ನಿರ್ಣಯದ ಮೇಲೆ ಭಾಜಪದ ನಾಯಕ ಸಿ.ಟಿ ರವಿ ಇವರು, ಇದು ಸರಕಾರದ ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಹಲವು ವರ್ಷಗಳ ನಂತರ ಕಾಂಗ್ರೆಸ್‌ಗೆ ಬುದ್ಧಿ ಬಂದಿದೆ. ಕಾಂಗ್ರೆಸ್ ಭಗವಾನ್ ಶ್ರೀರಾಮನನ್ನು ಬಿಟ್ಟಿತ್ತು; ಆದರೆ ಈಗ ಅವರು ಪುನಃ ಅದರ ಕಡೆ ಹೋಗುತ್ತಿದ್ದಾರೆ ಎಂದು ಹೇಳಿದರು.