‘ಸಿದ್ದರಾಮಯ್ಯ ಇವರೇ ರಾಮ ಇರುವುದರಿಂದ ಅವರು ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುವ ಅವಶ್ಯಕತೆ ಏನು ? (ಅಂತೆ) – ಕಾಂಗ್ರೆಸ್ಸಿನ ಮುಖಂಡ ಹೆಚ್. ಆಂಜನೇಯ

ರಾಜ್ಯದ ಕಾಂಗ್ರೆಸ್ಸಿನ ಮುಖಂಡ ಹೆಚ್. ಆಂಜನೇಯ ಇವರು ಶ್ರೀರಾಮ ಮಂದಿರದ ಉದ್ಘಾಟನೆಗೆ ಉಪಸ್ಥಿತ ಇರುವ ಸಂದರ್ಭದಲ್ಲಿ ಹಾಸ್ಯಾಸ್ಪದ ಹೇಳಿಕೆ !

ಕಾಂಗ್ರೆಸ್ಸಿನ ಮುಖಂಡ ಹೆಚ್. ಆಂಜನೇಯ

ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಸ್ವತಃ ರಾಮನಾಗಿದ್ದಾರೆ. ಅವರು ಅಯೋಧ್ಯೆಗೆ ಹೋಗಿ ಶ್ರೀ ರಾಮನ ದರ್ಶನ ಪಡೆಯುವ ಅವಶ್ಯಕತೆ ಏನು? ಅಯೋಧ್ಯೆಯಲ್ಲಿ ಭಾಜಪದ ರಾಮ ಇರುವನು. ಸಿದ್ದರಾಮಯ್ಯ ಇವರ ಗ್ರಾಮದಲ್ಲಿ ರಾಮನ ಮಂದಿರ ಇದೆ. ಅಲ್ಲಿಗೆ ಹೋಗಿ ಅವರು ರಾಮನ ದರ್ಶನ ಪಡೆಯುವರು, ಎಂದು ರಾಜ್ಯದ ಮಾಜಿ ಸಚಿವ ಮತ್ತು ಕಾಂಗ್ರೆಸ್ಸಿನ ಮುಖಂಡ ಹೆಚ್. ಆಂಜನೇಯ ಇವರು ಚಿತ್ರದುರ್ಗದಲ್ಲಿ ಪ್ರಸಾರ ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿದರು. ‘ಸಿದ್ದರಾಮಯ್ಯ ಇವರಿಗೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಕರೆದಿಲ್ಲ, ಇದು ಒಳ್ಳೆಯದೇ ಆಯಿತು, ಹೀಗೂ ಕೂಡ ಅವರು ಈ ಸಮಯದಲ್ಲಿ ಹೇಳಿದರು.

ಆಂಜನೇಯ ಇವರು ಮಾತು ಮುಂದುವರಿಸುತ್ತಾ,

೧. ಭಾಜಪದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ವಿಷಯ ಕಿಚ್ಚು ಉದ್ದೇಶಪೂರ್ವಕವಾಗಿ ಹೊತ್ತಿಸಲಾಗುತ್ತಿದೆ. ರಾಮ ಎಲ್ಲಾ ಕಡೆ ಇರುವನು. ರಾಮ ನಮ್ಮ ಹೃದಯದಲ್ಲಿ ಇದ್ದಾನೆ. ನನ್ನ ಹೆಸರು ಆಂಜನೇಯ. ರಾಮಾಯಣದಲ್ಲಿ ಆಂಜನೇಯನು ಏನು ಮಾಡಿದ್ದನು ಇದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. (ರಾಮಾಯಣದಲ್ಲಿನ ಆಂಜನೇಯ ಏನು ಮಾಡಿದ್ದನು ಮತ್ತು ಈಗಿನ ಆಂಜನೇಯ ಹೆಸರಿನವರು ಏನು ಮಾಡುತ್ತಿದ್ದಾರೆ, ಇದು ಹಿಂದುಗಳಿಗೆ ಕಾಣುತ್ತಿದೆ ! – ಸಂಪಾದಕರು)

೨. ‘ಧರ್ಮದ ಆಧಾರದಲ್ಲಿ ಬಿರುಕು ಮತ್ತು ರಾಜ್ಯ ಆಳುವುದು’, ಇದು ಭಾಜಪದ ನೀತಿಯಾಗಿದೆ. ಭಾಜಪಕ್ಕೆ, ಅವರು ಒಂದು ಧರ್ಮದ ಮೇಲೆ ಸತತ ದಾಳಿ ನಡೆಸಿದರೆ ಇತರ ಧರ್ಮದ ಜನರು ಅವರಿಗೆ ಮತ ನೀಡುವರು ಎಂದು ಅವರಿಗೆ ಅನಿಸುತ್ತಿದೆ. ನಾವು ಕೂಡ ಹಿಂದುಗಳೇ ಆಗಿದ್ದೇವೆ. ಭಾಜಪದಿಂದ ಹಿಂದೂ ಧರ್ಮ ಅಥವಾ ಹಿಂದುಗಳನ್ನು ಕೊಂಡಿಲ್ಲ.

೩. ಇಂದಿಗೂ ಯಾವ ಜಾಗದಲ್ಲಿ ರಸ್ತೆಯ ಮೇಲಿನ ನಾಯಿ ಕೂಡ ವಾಸಿಸುವುದಕ್ಕಾಗಿ ಯೋಗ್ಯವಾಗಿಲ್ಲ ಅಂತಹ ಜಾಗದಲ್ಲಿ ಕೆಲವು ದಲಿತರು ಇಂತಹ ಸ್ಥಳದಲ್ಲಿ ವಾಸಿಸುತ್ತಾರೆ. ಈ ಜನರಿಗಾಗಿ ಮನೆ ಕಟ್ಟಿ ಅವರಿಗೆ ಅಲ್ಲಿ ಸ್ಥಳಾಂತರಿಸಬೇಕು. ಈ ಮನೆಗಳಿಗೆ ಶ್ರೀರಾಮ ಮಂದಿರ ಅನ್ನಿ, ಆಗ ನಿಜವಾದ ರಾಮ ನಿಮಗೆ ಆಶೀರ್ವಾದ ನೀಡುವನು .(ಕರ್ನಾಟಕದಲ್ಲಿ ಈಗ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಅವರು ಈ ಪುಣ್ಯ ಕಾರ್ಯ ತಮ್ಮ ಸ್ವಹಸ್ಥದಿಂದ ಮಾಡಬೇಕು, ಹೀಗೆ ಜನರಿಗೆ ಅನಿಸುತ್ತದೆ ! – ಸಂಪಾದಕರು) ರಾಮನನ್ನು ಮತದ ರಾಜಕಾರಣಕ್ಕಾಗಿ ಮಾಡಬಾರದು ಎಂದು ಹೇಳಿದರು.