ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಭೋಪಾಲ – ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ರೌಡಿ ಲಾರೆನ್ಸ್ ಬಿಷ್ಣೋಯ್ ಇವರ ಹೆಸರಿನಲ್ಲಿ ಇ-ಮೇಲ್ ಕಳುಹಿಸಿ ಪಂಡಿತ್ ಧೀರೇಂದ್ರ ಕೃಷ್ಣ ಇವರಲ್ಲಿ 10 ಲಕ್ಷ ರೂಪಾಯಿಯ ಬೇಡಿಕೆಯನ್ನು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಛತರಪುರ ಜಿಲ್ಲೆಯ ಬಮಿಠಾ ಪೊಲೀಸರು ಆರೋಪಿಯನ್ನು ಬಿಹಾರದ ಪಾಟ್ನಾದಿಂದ ಬಂಧಿಸಿದ್ದಾರೆ.

ಪೊಲೀಸರು, ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಕೊಲ್ಲುವುದಾಗಿ ಇ-ಮೇಲ್ ಬೆದರಿಕೆ ಸಿಕ್ಕಿತ್ತು. ಆರೋಪಿಯು ‘ನಿನ್ನ ಪ್ರಾಣ ಉಳಿಬೇಕಾದರೆ ಒಂದೇ ದಿನದಲ್ಲಿ ನಮಗೆ 10 ಲಕ್ಷ ಕೊಡಿ’ ಎಂದು ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಬೆದರಿಕೆ ಹಾಕಿದ್ದರು. 10 ತಿಂಗಳ ಹಿಂದೆಯೂ ಅವರಿಗೆ ಇದೇ ರೀತಿಯ ಬೆದರಿಕೆ ಬಂದಿತ್ತು.