Ghaziabad Encounter : ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಬಲಾತ್ಕಾರಿ ಮಹಮ್ಮದ ಜುನೈದ ಗಾಯಾಳು !

ಗಾಝಿಜಿಯಾಬಾದ (ಉತ್ತರ ಪ್ರದೇಶ)ನಲ್ಲಿ ನಡೆದ ಘಟನೆ

ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !

ಗಾಝಿಯಾಬಾದ (ಉತ್ತರ ಪ್ರದೇಶ) – ಇಲ್ಲಿ ಓರ್ವ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಡಿಸೆಂಬರ್ 3 ರಂದು ರಾತ್ರಿ ಮಹಮ್ಮದ ಜುನೈದ ಮತ್ತು ಪೊಲೀಸರ ನಡುವೆ ಚಕಮಕಿ ನಡೆಯಿತು. ಇದರಲ್ಲಿ ಮಹಮ್ಮದನ ಕಾಲಿಗೆ ಗುಂಡು ತಗುಲಿ ಗಾಯಗೊಂಡನು. ಜುನೈದನ ಇತರ ನಾಲ್ವರು ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

ನವೆಂಬರ್ 30 ರಂದು ಗಾಜಿಯಾಬಾದನ ಟಾನಿಕಾ ಸಿಟಿ ಪರಿಸರದಲ್ಲಿ ಓರ್ವ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ ಎಂದು ಪೊಲೀಸರಲ್ಲಿ ದೂರು ದಾಖಲಿಸಲಾಗಿತ್ತು. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದರು. ಡಿಸೆಂಬರ 3ರಂದು ಖಾನಪುರಾದ ಅರಣ್ಯದಲ್ಲಿ ಶಂಕಿತನು ಅಡಗಿ ಕುಳಿತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪೊಲೀಸರು ಅಲ್ಲಿಗೆ ತಲುಪುತ್ತಿದ್ದಂತೆಯೇ ಶಂಕಿತನು ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಇದಕ್ಕೆ ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದಾರೆ. ಈ ಚಕಮಕಿಯಲ್ಲಿ ಮಹಮ್ಮದ್ ಜುನೈದನ ಕಾಲಿಗೆ ಗುಂಡು ತಗುಲಿ ಅವನು ಗಾಯಗೊಂಡನು. ತನಿಖೆಯ ಸಮಯದಲ್ಲಿ ಮಹಮ್ಮದನು ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ತಾನು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉಪ ಪೊಲೀಸ ಆಯುಕ್ತ ಲೋನಿ ತಿಳಿಸಿದರು. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.