Love Jihad in Surat : ಸೂರತನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ್ದ ಮುಸೇಬ್ ನ ಬಂಧನ !

ಮುಸೇಬ್ ಇನ್ಸ್ಟಾಗ್ರಾಮ್ ಮೂಲಕ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ್ದ !

ಸೂರತ (ಗುಜರಾತ) – ಇಲ್ಲಿ ಲವ್ ಜಿಹಾದದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಡಿಯಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮುಸೇಬ್ ಜಮಶೇದ ಮಣಿಯಾರ್ ಎಂಬ ಯುವಕನು ಸೂರತನ ಒಂದು ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಇದಕ್ಕಾಗಿ ಅವನು ‘ಕಟ್ಟರ ಮುಸ್ಲಿಂ’ ಹೆಸರಿನ ಒಂದು ಇನ್ಸ್ಟಾಗ್ರಾಮ್ ಖಾತೆ ತಯಾರಿಸಿದ್ದನು. ಗುಜರಾತ್ ಪೊಲೀಸರು ಅವನನ್ನು ಬಂಧಿಸಿದ್ದಾರೆ.

೨೨ ವರ್ಷದ ಮುಸೇಬ್ ನು ರಿಕ್ಷಾ ಚಾಲಕನಾಗಿದ್ದು ಅವನು ೯ ನೆ ತರಗತಿಯಲ್ಲಿ ಓದುತ್ತಿರುವ ೧೫ ವರ್ಷದ ಹಿಂದೂ ಹುಡುಗಿಗೆ ಇನ್ಸ್ಟಾಗ್ರಾಮ್ ಮೂಲಕ ತನ್ನ ಜಾಲಕ್ಕೆ ಸಿಲುಕಿಸಿದ್ದಾನೆ. ಕೆಲವು ದಿನಗಳಿಂದ ಅವನು ಛತ್ರಪತಿ ಸಂಭಾಜಿ ನಗರದಿಂದ ಸೂರತಗೆ ಬಂದಿದ್ದ ಮತ್ತು ಅವನು ಅವನ ಹುಟ್ಟುಹಬ್ಬ ಆಚರಿಸುವುದಕ್ಕೆ ಹುಡುಗಿಗೆ ಹೋಟೆಲ್ ಗೆ ಕರೆಸಿದನು. ಅಲ್ಲಿಂದ ಆಕೆಯನ್ನು ಅಪಹರಿಸಿ ಅವನು ಪರಾರಿಯಾದನು. ಇದು ಗಮನಕ್ಕೆ ಬರುತ್ತಲೇ ಸಂತ್ರಸ್ತೆಯ ಕುಟುಂಬದವರು ಮುಸೇಬ್ ನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದರು. ಮುಸೇಬ ಹುಡುಗಿಯನ್ನು ಕರೆದುಕೊಂಡು ಮೊದಲು ಮುಂಬಯಿಗೆ ಹೋದನು ಮತ್ತು ನಂತರ ಅವನು ರಾಜಸ್ಥಾನದಲ್ಲಿನ ಅಜಮೇರ ನಗರಕ್ಕೆ ಹೋದನು. ಸುಮಾರು ೧೫ ದಿನದ ನಂತರ ಮಹಾರಾಷ್ಟ್ರಕ್ಕೆ ಹಿಂತಿರುಗುವಾಗ ಮುಸೇಬ್ ನನ್ನು ಗುಜರಾತ್ ಪೊಲೀಸರು ಕರ್ಣಾವತಿಯ ರೈಲು ನಿಲ್ದಾಣದಲ್ಲಿ  ಬಂಧಿಸಿದರು. ಹುಡುಗಿಯನ್ನು ವಶಕ್ಕೆ ಪಡೆದು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪರೀಕ್ಷೆಯಲ್ಲಿ ಏನಾದರೂ ಆಕೆಯ ಮೇಲೆ ಬಲಾತ್ಕಾರ ಆಗಿರುವುದು ಬೆಳಕಿಗೆ ಬಂದರೆ, ಆಗ ಮುಸೇಬ್ ನ ಮೇಲೆ ‘ಪೋಕ್ಸೋ’ ಕಾನೂನಿನ ಅಂತರ್ಗತ ದೂರು ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ವಿವಿಧ ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಕೂಡ ಮತಾಂಧ ಮುಸಲ್ಮಾನರು ಈ ಕಾನೂನಿಗೆ ಬಗ್ಗದೆ ಲವ್ ಚಿಹಾದಿನ ಷಡ್ಯಂತ್ರ ರೂಪಿಸುತ್ತರೆ ಮತ್ತು ಅನೇಕ ಬಾರಿ ಅದರಲ್ಲಿ ಯಶಸ್ವಿ ಆಗುತ್ತಾರೆ. ಆದ್ದರಿಂದ ಕೇವಲ ಕಾನೂನು ರೂಪಿಸುವುದಷ್ಟೇ ಅಲ್ಲದೆ ಹಿಂದುಗಳು ಹುಡುಗಿಯರನ್ನು ಲವ್ ಜಿಹಾದಾದ ವಿರುದ್ಧ ಜಾಗೃತಗೊಳಿಸುವುದಕ್ಕಾಗಿ ಈಗ ಸರಕಾರವು ಅಭಿಯಾನ ಕೈಗೆತ್ತಿಕೊಳ್ಳುವುದು ಆವಶ್ಯಕವಾಗಿದೆ.