ಮೈಸೂರಿನ ಟಿ. ನರಸೀಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡ್ ನ ಕಾರ್ಯಕರ್ತನ ಬರ್ಬರ ಹತ್ಯೆ

ಮೈಸೂರು ಜಿಲ್ಲೆಯಲ್ಲಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಶ್ರೀ ವೇಣುಗೋಪಾಲ್ ಬರ್ಬರ ಹತ್ಯೆ

ಮೈಸೂರು – ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡನ ಕಾರ್ಯಕರ್ತ ವೇಣುಗೋಪಾಲ ನಾಯಕ(ವಯಸ್ಸು 32 ವರ್ಷಗಳು) ನ ಹತ್ಯೆಯಲ್ಲಿ ಅಂತ್ಯಗೊಂಡಿತು. ಮೈಸೂರಿನ ಟಿ. ನರಸೀಪುರದಲ್ಲಿ ಈ ಘಟನೆ ನಡೆಯಿತು. ಈ ಪ್ರಕರಣದಲ್ಲಿ ಮಣಿಕಂಠ ಮತ್ತು ಸಂದೇಶ ಇವರನ್ನು ಬಂಧಿಸಲಾಗಿದ್ದು, ಇತರೆ 4 ಜನರು ಇದುವರೆಗೂ ತಲೆ ಮರೆಸಿಕೊಂಡಿದ್ದಾರೆ. ಇಲ್ಲಿ ಹನುಮಾನ ಜಯಂತಿಯ ನಿಮಿತ್ತದಿಂದ ಮೆರವಣಿಗೆ ನಡೆಸಲಾಯಿತು. ಆಗ ಈ ವಾದ ನಡೆಯಿತು.