ಉತ್ತರಪ್ರದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಮತಾಂತರಗೊಳಿಸಿದ 3 ಮುಸಲ್ಮಾನರ ಬಂಧನ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ಓರ್ವ ಹಿಂದೂ ವ್ಯಕ್ತಿಯನ್ನು ಮತಾಂತರಗೊಳಿಸಿರುವ ಪ್ರಕರಣದಲ್ಲಿ 3 ಮುಸಲ್ಮಾನರನ್ನು ಬಂಧಿಸಿದೆ. ಬಂಧಿತರನ್ನು ಸಹಾರನಪುರದ ನಾಜಿಮ್ ಹಸನ್, ಮಹಮ್ಮದ್ ಸಾದಿಕ್ ಮತ್ತು ಅಜಹರ್ ಮಲಿಕ್ ಎಂದು ಗುರುತಿಸಲಾಗಿದೆ. ಅವರು ಗೌರವ ಸಿಂಹ ಹೆಸರಿನ ಹಿಂದೂ ವ್ಯಕ್ತಿಯನ್ನು ಮತಾಂತರಗೊಳಿಸಿದ್ದರು. ಉಗ್ರ ನಿಗ್ರಹ ದಳವು, ಬೆಂಗಳೂರಿನಲ್ಲಿ ಇನ್ನೊಬ್ಬ ಆರೋಪಿ ರೇಶ್ಮಾಳು ಗೌರವ ಸಿಂಹನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಿದ್ದಳು ಎಂದು ತಿಳಿಸಿದೆ. ರೇಶ್ಮಾ ಸದ್ಯಕ್ಕೆ ಪರಾರಿಯಾಗಿದ್ದಾಳೆ.

ಸಂಪಾದಕೀಯ ನಿಲುವು

ಕಠಿಣ ಶಿಕ್ಷೆಯಿರುವ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸಿ !