ಖಲಿಸ್ತಾನಿ ಅಮೃತಪಾಲನ ಸಹಚರ ಪಪಲಪ್ರೀತನ ಬಂಧನ

ಚಂಡೀಗಡ- `ವಾರಿಸ ಪಂಜಾಬ ದೆ’ (ಪಂಜಾಬಿನ ಮಾಲೀಕ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹ ಇವನ ಆತ್ಮೀಯ ಸಹಚರ ಪಪಲಪ್ರೀತನನ್ನು ಪಂಜಾಬ ಪೊಲೀಸರು ಬಂಧಿಸಿದ್ದಾರೆ. ಅವನನ್ನು ಪಂಜಾಬ್ ನ ಹೋಶಿಯಾರಪುರದಿಂದ ಬಂಧಿಸಲಾಗಿದೆ. ಸಿಕ್ಕಿರುವ ಮಾಹಿತಿಯನುಸಾರ ಪಪಲಪ್ರೀತ ಸಿಂಹನು ಅಮೃತಸರದ ತನ್ನ ಗ್ರಾಮದಿಂದ ಶರಣಾಗುವ ಸಿದ್ಧತೆಯಲ್ಲಿದ್ದನು; ಆದರೆ ಪಪಲಪ್ರೀತ ಹೋಶಿಯಾರಪುರದಲ್ಲಿರುವ ಮಾಹಿತಿ ಸಿಗುತ್ತಲೇ, ಅವನನ್ನು ಅಲ್ಲಿಂದ ಬಂಧಿಸಲಾಯಿತು. ಅಮೃತಪಾಲ ಮತ್ತು ಪಪಲಪ್ರೀತ ಒಂದೇ ದ್ವಿಚಕ್ರವಾಹನದಿಂದ ಪರಾರಿಯಾಗಿದ್ದರು.